ಯೂಸೂಫ್ ಅವರು ಟ್ರ್ಯಾಕ್ಟರ್ ಖರೀದಿಗೆ ಇದೇ ಗ್ರಾಮದ ನಿವಾಸಿ ಜಗದೇವಿ ಅವರ ಬಳಿ ₹3 ಲಕ್ಷ ಸಾಲ ಪಡೆದು, 5 ರಿಂದ 6 ತಿಂಗಳಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ಎರಡು ವರ್ಷ ಕಳೆದರೂ ಸಾಲದ ಹಣ ಮರುಪಾವತಿಸಿರಲಿಲ್ಲ. ಹೀಗಾಗಿ, 2015ರ ಏಪ್ರಿಲ್ 28ರಂದು ಸಾಲ ಹಣದ ಬದಲಿಗೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ಶರಣು ದೇವೀಂದ್ರಪ್ಪ ಮತ್ತು ದೇವಿಂದ್ರಪ್ಪ ಭಾಸಗಿ ಅವರ ಮೇಲೆ ಯೂಸೂಫ್ ಚಾಕುವಿನಿಂದ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಕೊಲೆಗೆ ಯತ್ನಿಸಿದ್ದ. ಈ ಗಲಾಟೆಯಲ್ಲಿ ಶರಣು ಮತ್ತು ದೇವೀಂದ್ರಪ್ಪ ಅವರಿಗೆ ಗಾಯಗಳಾಗಿದ್ದವು. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯ ಅಧಿಕರಿಗಳು ಯೂಸೂಫ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.