ಕಲಬುರ್ಗಿ: ಹತ್ತು ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಸಂಗೀತ ಕಲಿತವರು ನಿರುದ್ಯೋಗಿಗಳಾಗಿದ್ದು, ಮನೆ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಕೂಡಲೇ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಸಂಗೀತ ಶಿಕ್ಷಕರ ನೇಮಕಾತಿ ಸಮಿತಿ ಸದಸ್ಯರು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ಸಂಸ್ಥಾಪಕ ಬಂಡಯ್ಯ ಸ್ವಾಮಿ ಸುಂಟನೂರ, ಅಣ್ಣಾರಾವ ಮತ್ತಿಮುಡ, ಬಾಬುರಾವ್ ಕೂಬಾಳ, ಹಿರಿಯ ಕಲಾವಿದ ಸಿದ್ದಣ್ಣ ದೇಸಾಯಿಕಲ್ಲೂರ, ಶಿವಕುಮಾರ್ ಜಾಲಹಳ್ಳಿ, ಜಗದೀಶ್ ದೇಸಾಯಿಕಲ್ಲೂರ, ರೇವಣ್ಣಯ್ಯ ಸುಂಟನೂರ, ವೀರಭದ್ರಯ್ಯ ಸ್ಥಾವರಮಠ ಸಚಿವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.