ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರ ಗೋಳು ಆಲಿಸಿದ ಅವರು, ‘ಬಿರುಕುಬಿಟ್ಟ 20 ಮನೆಗಳ ದುರಸ್ತಿಗಾಗಿ ತಾತ್ಕಾಲಿಕ ಪರಿಹಾರ ನೀಡಲಾಗುವುದು. ಪದೇಪದೇ ಭೂಕಂಪನದ ಕಾರಣ ಸಂಕಷ್ಟ ಎದುರಿಸಿದವರು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೂ ಪರಿಹಾರ ನೀಡುವ ಸಂಬಂಧ ಒಂದು ಸಮಿತಿ ರಚಿಸಿ ವರದಿ ತರಿಸಿಕೊಳ್ಳುತ್ತೇನೆ’ ಎಂದರು.