ಕಲಬುರಗಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್ ಮೂಲಕ ನಡೆಯುವ ಆರ್ಥಿಕ ವಹಿವಾಟುಗಳ ಮೇಲೆಯೂ ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ‘ಯಾವುದೇ ಸಂಶಯಾಸ್ಪದ ವಹಿವಾಟು ಕಂಡುಬಂದಲ್ಲಿ ಕೂಡಲೆ ಗಮನಕ್ಕೆ ತರಬೇಕು’ ಎಂದರು.
₹50 ಸಾವಿರ ಮೇಲ್ಪಟ್ಟು ಒಂದೇ ಖಾತೆಯಿಂದ ಹಲವರ ಖಾತೆಗೆಳಿಗೆ ಆರ್.ಟಿ.ಜಿ.ಸ್ ಮೂಲಕ ಹಣ ವರ್ಗಾವಣೆ, ₹1 ಲಕ್ಷ ಮೇಲ್ಪಟ್ಟ ಹಣ ಜಮೆ ಹಾಗೂ ರಾಜಕೀಯ ಪಕ್ಷಗಳ ಖಾತೆಯ ಪ್ರತಿ ವಿತ್ಡ್ರಾ ಹಾಗೂ ಡಿಪಾಸಿಟ್ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.