‘ಆರೋಪಿ ಗುರುವಾರ ಬೆಳಿಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ.ದಿಗಂಬರ ತಮ್ಮ ಕುಟುಂಬ ಸಮೇತ ಕಲಬುರ್ಗಿಯ ರಾಮ ಮಂದಿರ ಬಳಿ ವಾಸವಾಗಿದ್ದು, ಅಲ್ಲಿಯೇ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ. ಕುಟುಂಬದಲ್ಲಿ ಕಲಹ ಮೂಡಿದ್ದರಿಂದ ಎರಡು ತಿಂಗಳ ಹಿಂದೆ, ಪತ್ನಿಯ ತವರೂರು ಸೇಡಂನಲ್ಲಿ ಈ ಕುಟುಂಬ ನೆಲೆಸಿತ್ತು’ ಎಂದು ಪೊಲೀಸರು ಹೇಳಿದ್ದಾರೆ.