<p><strong>ಆಳಂದ:</strong> ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ದರೋಡೆಕೋರರ ಗುಂಪೊಂದು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಹಣ, ಒಡವೆ ಹಾಗೂ ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.</p>.<p>ಆರು ಜನ ಮುಸುಕುಧಾರಿಗಳು ಮಧ್ಯರಾತ್ರಿ ಮನೆ ದರೋಡೆಗೆ ತೆರಳುವ ದೃಶ್ಯ ಮುಖ್ಯರಸ್ತೆಯ ಮನೆ, ಅಂಗಡಿಯಲ್ಲಿ ಹಾಕಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ಗ್ರಾಮದ ಚಾಂದಸಾಬ ಮಡ್ಡಿ ಎಂಬುವರ ಮನೆಗೆ ನುಗ್ಗಿದ ಕಳ್ಳರ ತಂಡ, ಅಲಮಾರ್ ಮುರಿದು ಅದರಲ್ಲಿದ್ದ ₹50 ಸಾವಿರ ನಗದು, 10 ಗ್ರಾಂ ಚಿನ್ನ ದೋಚಿದ್ದಾರೆ. ಅಮಿತ್ ನಾಗೂರೆ ಅವರ ಕಿರಾಣಿ ಅಂಗಡಿಯಲ್ಲಿದ್ದ ಅಂದಾಜು ₹45 ಸಾವಿರಕ್ಕೂ ಹೆಚ್ಚು ನಗದು ಹಾಗೂ ಬಾದಾಮಿ, ಕಾಜೂ ಮತ್ತಿತರ ತಿನಿಸು ದೋಚಿದ್ದಾರೆ.</p>.<p>ವಿಜಯಕುಮಾರ ಟಪ್ಪಾ ಎಂಬುವರ ಮನೆಯಲ್ಲಿದ್ದ ಪೆಟ್ಟಿಗೆ ಒಡೆದು 10 ಗ್ರಾಂ ಚಿನ್ನ ಹಾಗೂ ₹20 ಸಾವಿರ ನಗದು ಹಾಗೂ ಬೆಲೆಬಾಳುವಬಟ್ಟೆ ದೋಚಿಕೊಂಡು ಹೋಗಿದ್ದಾರೆ. ಗ್ರಾಮದ ನಾಗೂರೆ ಮನೆಯ ಸುತ್ತಲಿನ ಇನ್ನು ಎರಡು ಮನೆಗಳ ಮುಂದಿನ ಅಂಗಡಿ ಬಾಗಿಲು ಒಡೆದು ಕಳವು ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಮೀಪದ ಜನರ ಓಡಾಟ ಕೇಳಿ ಬಂದಿದ್ದರಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ.</p>.<p>ಮುಂದೆ ಅಂಬೇಡ್ಕರ್ ಸರ್ಕಲ್ ಹತ್ತಿರ ದರೋಡೆಕೋರರ ಸುಳಿವು ಕಂಡು ಜನ ಎಚ್ಚರಗೊಂಡಿದ್ದಾರೆ. ಸಮೀಪದ ಮನೆಗಳ ಜನ ಹೊರಬರುತ್ತಲೆ ದರೋಡೆಕೋರರು ಅಲ್ಲಿಂದ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಜನರು ಬೆನ್ನಟ್ಟುವ ಪ್ರಯತ್ನ ಸಹ ಮಾಡಿದ್ದಾರೆ.</p>.<p>ಮುಸುಕುಧಾರಿಗಳಾದ ಆರು ಜನರು ಮುಖ್ಯರಸ್ತೆಯಲ್ಲಿ ಕೈಯಲ್ಲಿ ಕಲ್ಲು ಹಿಡಿದು ಓಡಾಡಿದ ದೃಶ್ಯಗಳು ಸಿಸಿಟಿವಿಕ್ಯಾಮೆರಾಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬುಧವಾರ ಬೆಳಿಗ್ಗೆ ನಿಂಬರ್ಗಾ ಪೊಲೀಸರು ಮತ್ತು ಕಲಬುರಗಿಯಿಂದ ಶ್ವಾನದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.</p>.<p>ಬೆರಳಚ್ಚು ತಜ್ಞರು ಸಹ ವಿವಿಧ ಮನೆಗಳಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ಪಿಎಸ್ಐ ಇಂದುಮತಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ:</strong> ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ದರೋಡೆಕೋರರ ಗುಂಪೊಂದು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಹಣ, ಒಡವೆ ಹಾಗೂ ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.</p>.<p>ಆರು ಜನ ಮುಸುಕುಧಾರಿಗಳು ಮಧ್ಯರಾತ್ರಿ ಮನೆ ದರೋಡೆಗೆ ತೆರಳುವ ದೃಶ್ಯ ಮುಖ್ಯರಸ್ತೆಯ ಮನೆ, ಅಂಗಡಿಯಲ್ಲಿ ಹಾಕಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>.<p>ಗ್ರಾಮದ ಚಾಂದಸಾಬ ಮಡ್ಡಿ ಎಂಬುವರ ಮನೆಗೆ ನುಗ್ಗಿದ ಕಳ್ಳರ ತಂಡ, ಅಲಮಾರ್ ಮುರಿದು ಅದರಲ್ಲಿದ್ದ ₹50 ಸಾವಿರ ನಗದು, 10 ಗ್ರಾಂ ಚಿನ್ನ ದೋಚಿದ್ದಾರೆ. ಅಮಿತ್ ನಾಗೂರೆ ಅವರ ಕಿರಾಣಿ ಅಂಗಡಿಯಲ್ಲಿದ್ದ ಅಂದಾಜು ₹45 ಸಾವಿರಕ್ಕೂ ಹೆಚ್ಚು ನಗದು ಹಾಗೂ ಬಾದಾಮಿ, ಕಾಜೂ ಮತ್ತಿತರ ತಿನಿಸು ದೋಚಿದ್ದಾರೆ.</p>.<p>ವಿಜಯಕುಮಾರ ಟಪ್ಪಾ ಎಂಬುವರ ಮನೆಯಲ್ಲಿದ್ದ ಪೆಟ್ಟಿಗೆ ಒಡೆದು 10 ಗ್ರಾಂ ಚಿನ್ನ ಹಾಗೂ ₹20 ಸಾವಿರ ನಗದು ಹಾಗೂ ಬೆಲೆಬಾಳುವಬಟ್ಟೆ ದೋಚಿಕೊಂಡು ಹೋಗಿದ್ದಾರೆ. ಗ್ರಾಮದ ನಾಗೂರೆ ಮನೆಯ ಸುತ್ತಲಿನ ಇನ್ನು ಎರಡು ಮನೆಗಳ ಮುಂದಿನ ಅಂಗಡಿ ಬಾಗಿಲು ಒಡೆದು ಕಳವು ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಮೀಪದ ಜನರ ಓಡಾಟ ಕೇಳಿ ಬಂದಿದ್ದರಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ.</p>.<p>ಮುಂದೆ ಅಂಬೇಡ್ಕರ್ ಸರ್ಕಲ್ ಹತ್ತಿರ ದರೋಡೆಕೋರರ ಸುಳಿವು ಕಂಡು ಜನ ಎಚ್ಚರಗೊಂಡಿದ್ದಾರೆ. ಸಮೀಪದ ಮನೆಗಳ ಜನ ಹೊರಬರುತ್ತಲೆ ದರೋಡೆಕೋರರು ಅಲ್ಲಿಂದ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಜನರು ಬೆನ್ನಟ್ಟುವ ಪ್ರಯತ್ನ ಸಹ ಮಾಡಿದ್ದಾರೆ.</p>.<p>ಮುಸುಕುಧಾರಿಗಳಾದ ಆರು ಜನರು ಮುಖ್ಯರಸ್ತೆಯಲ್ಲಿ ಕೈಯಲ್ಲಿ ಕಲ್ಲು ಹಿಡಿದು ಓಡಾಡಿದ ದೃಶ್ಯಗಳು ಸಿಸಿಟಿವಿಕ್ಯಾಮೆರಾಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬುಧವಾರ ಬೆಳಿಗ್ಗೆ ನಿಂಬರ್ಗಾ ಪೊಲೀಸರು ಮತ್ತು ಕಲಬುರಗಿಯಿಂದ ಶ್ವಾನದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.</p>.<p>ಬೆರಳಚ್ಚು ತಜ್ಞರು ಸಹ ವಿವಿಧ ಮನೆಗಳಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ಪಿಎಸ್ಐ ಇಂದುಮತಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>