ಮನೆಯಲ್ಲಿ ದವಸಧಾನ್ಯವೂ ಇಲ್ಲ. ಹಸಿವಾದಾಗ ಅಕ್ಕಪಕ್ಕದ ಮನೆಯವರ ಹತ್ತಿರ ಬೇಡಿ ಹಸಿವು ನೀಗಿಸಿಕೊಳ್ಳುತ್ತಾರೆ. ಯಾರಾದರೂ ಊಟ ತಂದು ಕೊಟ್ಟರೆ ಊಟ ಮಾಡುತ್ತಾರೆ. ರೈಲು ನಿಲ್ದಾಣಕ್ಕೆ ತೆರಳಿ ಜನರಿಂದ ಹಣ ಬೇಡಿಕೊಂಡು ಬಂದು ಜೀವನ ಸಾಗಿಸುತ್ತಿದ್ದಾರೆ ಎಂದು ತಾಂಡಾದ ದ್ರೌಪದಿ ರಾಠೋಡ್, ಈಶ್ವರ ರಾಠೋಡ್ ತಿಳಿಸಿದರು.