<p><strong>ಕಲಬುರಗಿ</strong>: ನಿರಂತರ ಮಳೆಯಿಂದ ತರಕಾರಿ, ಸೊಪ್ಪುಗಳಿಗೆ ಹಾನಿ ಹಾಗೂ ಆವಕ ಕಡಿಮೆಯಾಗಿರುವುದರಿಂದ ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.</p>.<p>ಕಳೆದ ವಾರ ₹40ರಿಂದ ₹50ರ ಆಸು ಪಾಸಿನಲ್ಲಿದ್ದ ಟೊಮೆಟೊ ಈಗ ಕೆಜಿಗೆ ₹80ರಿಂದ ₹90ವರೆಗೆ ಮಾರಾಟವಾಗುತ್ತಿದ್ದು, ₹25ರಿಂದ ₹30 ಇದ್ದ ಉತ್ತಮ ಗುಣಮಟ್ಟದ ಈರುಳ್ಳಿ ದರ (ಮಂಗಳವಾರ) ಏಕಾಏಕಿ ₹50ರಿಂದ ₹60ಕ್ಕೆ ಏರಿಕೆಯಾಗಿದೆ.</p>.<p>ಕೆ.ಜಿ.ಗೆ ಹಸಿ ಮೆಣಸಿನಕಾಯಿ ₹120, ಬದನೆಕಾಯಿ ₹100, ಕ್ಯಾರೆಟ್ ₹80, ಸೌತೆಕಾಯಿ ₹100, ಟೊಮೊಟೊ ₹80, ಹಾಗಲಕಾಯಿ ₹80, ಬೆಂಡೆಕಾಯಿ ₹80, ಹಿರೇಕಾಯಿ ₹100–₹120, ಆಲೂಗಡ್ಡೆ ₹60, ಬೆಳ್ಳುಳ್ಳಿ ₹200, ಹಸಿ ಶುಂಠಿ ₹260, ಕ್ಯಾಬೆಜ್ ಒಂದಕ್ಕೆ ₹ 40, ಫ್ಲಾವರ್ ₹40, ತುಪ್ಪದ ಹೀರೆಕಾಯಿ ₹80 ಕೆಜಿಗೆ ಮಾರಾಟ ಮಾಡಲಾಗುತ್ತಿದೆ.</p>.<p><strong>ಸೊಪ್ಪುಗಳ ಬೆಲೆಯಲ್ಲಿ ಭಾರಿ ಏರಿಕೆ:</strong> ಕಳೆದ ವಾರ ಕೊತ್ತಂಬರಿ ಒಂದು ಕಟ್ಟಿಗೆ ₹10ರಿಂದ ₹20ಕ್ಕೆ ಮಾರಾಟವಾಗಿದ್ದರೆ, ಈ ವಾರ ₹20ರಿಂದ ₹30ರವರೆಗೆ ಮಾರಾಟವಾಗುತ್ತಿದೆ. ಮೆಂತೆ ಸೊಪ್ಪು ₹20, ಪಾಲಕ ಸೊಪ್ಪು ₹20, ರಾಜಗಿರಿ ಸೊಪ್ಪು ₹20, ಪೂದಿನಾ ಸೊಪ್ಪು ₹30 ದರದಲ್ಲಿ ಮಾರಾಟವಾಗುತ್ತಿದೆ. ಪುಂಡಿಪಲ್ಯೆ ₹15ರಿಂದ ₹20ಗೆ ಒಂದು ಕಟ್ಟು ಬಿಕರಿಯಾಗುತ್ತಿದೆ.</p>.<p><strong>ಕಣ್ಣೀರು ತರಿಸುತ್ತ ಈರುಳ್ಳಿ:</strong> ಕಳೆದ ತಿಂಗಳಿಂದ ಪ್ರತಿ ಕೆಜಿಗೆ ₹20ರಿಂದ ₹30 ದರದಲ್ಲಿ ಸ್ಥಿರವಾಗಿದ್ದ ಈರುಳ್ಳಿ ಬೆಲೆ ಎರಡರಿಂದ ಮೂರು ದಿನಗಳಲ್ಲಿ ₹20 ರಿಂದ ₹30 ಬೆಲೆ ಏರಿಕೆ ಕಂಡು ₹50ರಿಂದ ₹60ಗೆ ಮಾರಾಟವಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕಾರಣ ವಿದೇಶಗಳಿಗೆ ರಪ್ತು ಹೆಚ್ಚಳವಾಗುವ ಸಾಧ್ಯತೆ ಇದ್ದು, ನಿರಂತರ ಮಳೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣ ಈರುಳ್ಳಿ ಬರುತ್ತಿಲ್ಲ. ಆದ್ದರಿಂದ ಇನ್ನಷ್ಟು ದರ ಏರಿಕೆಯಾಗುವ ಸಂಭವ ಇದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ಹಣಮಂತ.</p>.<div><blockquote>ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದ್ದು ಮಳೆಯ ಕೊರತೆಯಿಂದ ಆವಕ ಕಡಿಮೆಯಾಗಿ ದರ ದುಪ್ಪಟ್ಟಾಗಿದೆ. ವರ್ಷದ ಈ ಅವಧಿಯಲ್ಲಿ ಸಾಮಾನ್ಯವಾಗಿ ಸೊಪ್ಪುಗಳ ದರ ಹೆಚ್ಚಳವಾಗಿರುವುತ್ತದೆ. </blockquote><span class="attribution">ಶಿವರಾಜ, ತರಕಾರಿ ಸೊಪ್ಪು ವ್ಯಾಪಾರಿ</span></div>.<div><blockquote>ತರಕಾರಿ ಹಾಗೂ ಸೊಪ್ಪುಗಳ ಬೆಲೆ ದಿಢೀರ್ ಏರಿಕೆಯಾಗಿ ಆರ್ಥಿಕ ಹೊರೆಯಾಗುತ್ತಿದೆ. ವಾರಕ್ಕಾಗುವಷ್ಟು ತರಕಾರಿ ಖರೀದಿ ಮಾಡಬೇಕಾದರೂ ಕನಿಷ್ಟ ₹500 ಬೇಕಾಗಿದೆ.</blockquote><span class="attribution"> ಶಿವಯೋಗಿ, ಓಂ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ನಿರಂತರ ಮಳೆಯಿಂದ ತರಕಾರಿ, ಸೊಪ್ಪುಗಳಿಗೆ ಹಾನಿ ಹಾಗೂ ಆವಕ ಕಡಿಮೆಯಾಗಿರುವುದರಿಂದ ನಗರದ ಮಾರುಕಟ್ಟೆಗಳಲ್ಲಿ ಅಗತ್ಯ ತರಕಾರಿಗಳ ಬೆಲೆ ಗಗನಕ್ಕೆ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.</p>.<p>ಕಳೆದ ವಾರ ₹40ರಿಂದ ₹50ರ ಆಸು ಪಾಸಿನಲ್ಲಿದ್ದ ಟೊಮೆಟೊ ಈಗ ಕೆಜಿಗೆ ₹80ರಿಂದ ₹90ವರೆಗೆ ಮಾರಾಟವಾಗುತ್ತಿದ್ದು, ₹25ರಿಂದ ₹30 ಇದ್ದ ಉತ್ತಮ ಗುಣಮಟ್ಟದ ಈರುಳ್ಳಿ ದರ (ಮಂಗಳವಾರ) ಏಕಾಏಕಿ ₹50ರಿಂದ ₹60ಕ್ಕೆ ಏರಿಕೆಯಾಗಿದೆ.</p>.<p>ಕೆ.ಜಿ.ಗೆ ಹಸಿ ಮೆಣಸಿನಕಾಯಿ ₹120, ಬದನೆಕಾಯಿ ₹100, ಕ್ಯಾರೆಟ್ ₹80, ಸೌತೆಕಾಯಿ ₹100, ಟೊಮೊಟೊ ₹80, ಹಾಗಲಕಾಯಿ ₹80, ಬೆಂಡೆಕಾಯಿ ₹80, ಹಿರೇಕಾಯಿ ₹100–₹120, ಆಲೂಗಡ್ಡೆ ₹60, ಬೆಳ್ಳುಳ್ಳಿ ₹200, ಹಸಿ ಶುಂಠಿ ₹260, ಕ್ಯಾಬೆಜ್ ಒಂದಕ್ಕೆ ₹ 40, ಫ್ಲಾವರ್ ₹40, ತುಪ್ಪದ ಹೀರೆಕಾಯಿ ₹80 ಕೆಜಿಗೆ ಮಾರಾಟ ಮಾಡಲಾಗುತ್ತಿದೆ.</p>.<p><strong>ಸೊಪ್ಪುಗಳ ಬೆಲೆಯಲ್ಲಿ ಭಾರಿ ಏರಿಕೆ:</strong> ಕಳೆದ ವಾರ ಕೊತ್ತಂಬರಿ ಒಂದು ಕಟ್ಟಿಗೆ ₹10ರಿಂದ ₹20ಕ್ಕೆ ಮಾರಾಟವಾಗಿದ್ದರೆ, ಈ ವಾರ ₹20ರಿಂದ ₹30ರವರೆಗೆ ಮಾರಾಟವಾಗುತ್ತಿದೆ. ಮೆಂತೆ ಸೊಪ್ಪು ₹20, ಪಾಲಕ ಸೊಪ್ಪು ₹20, ರಾಜಗಿರಿ ಸೊಪ್ಪು ₹20, ಪೂದಿನಾ ಸೊಪ್ಪು ₹30 ದರದಲ್ಲಿ ಮಾರಾಟವಾಗುತ್ತಿದೆ. ಪುಂಡಿಪಲ್ಯೆ ₹15ರಿಂದ ₹20ಗೆ ಒಂದು ಕಟ್ಟು ಬಿಕರಿಯಾಗುತ್ತಿದೆ.</p>.<p><strong>ಕಣ್ಣೀರು ತರಿಸುತ್ತ ಈರುಳ್ಳಿ:</strong> ಕಳೆದ ತಿಂಗಳಿಂದ ಪ್ರತಿ ಕೆಜಿಗೆ ₹20ರಿಂದ ₹30 ದರದಲ್ಲಿ ಸ್ಥಿರವಾಗಿದ್ದ ಈರುಳ್ಳಿ ಬೆಲೆ ಎರಡರಿಂದ ಮೂರು ದಿನಗಳಲ್ಲಿ ₹20 ರಿಂದ ₹30 ಬೆಲೆ ಏರಿಕೆ ಕಂಡು ₹50ರಿಂದ ₹60ಗೆ ಮಾರಾಟವಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಕಾರಣ ವಿದೇಶಗಳಿಗೆ ರಪ್ತು ಹೆಚ್ಚಳವಾಗುವ ಸಾಧ್ಯತೆ ಇದ್ದು, ನಿರಂತರ ಮಳೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣ ಈರುಳ್ಳಿ ಬರುತ್ತಿಲ್ಲ. ಆದ್ದರಿಂದ ಇನ್ನಷ್ಟು ದರ ಏರಿಕೆಯಾಗುವ ಸಂಭವ ಇದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ಹಣಮಂತ.</p>.<div><blockquote>ಸೊಪ್ಪುಗಳಿಗೆ ಬೇಡಿಕೆ ಹೆಚ್ಚಿದ್ದು ಮಳೆಯ ಕೊರತೆಯಿಂದ ಆವಕ ಕಡಿಮೆಯಾಗಿ ದರ ದುಪ್ಪಟ್ಟಾಗಿದೆ. ವರ್ಷದ ಈ ಅವಧಿಯಲ್ಲಿ ಸಾಮಾನ್ಯವಾಗಿ ಸೊಪ್ಪುಗಳ ದರ ಹೆಚ್ಚಳವಾಗಿರುವುತ್ತದೆ. </blockquote><span class="attribution">ಶಿವರಾಜ, ತರಕಾರಿ ಸೊಪ್ಪು ವ್ಯಾಪಾರಿ</span></div>.<div><blockquote>ತರಕಾರಿ ಹಾಗೂ ಸೊಪ್ಪುಗಳ ಬೆಲೆ ದಿಢೀರ್ ಏರಿಕೆಯಾಗಿ ಆರ್ಥಿಕ ಹೊರೆಯಾಗುತ್ತಿದೆ. ವಾರಕ್ಕಾಗುವಷ್ಟು ತರಕಾರಿ ಖರೀದಿ ಮಾಡಬೇಕಾದರೂ ಕನಿಷ್ಟ ₹500 ಬೇಕಾಗಿದೆ.</blockquote><span class="attribution"> ಶಿವಯೋಗಿ, ಓಂ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>