‘ಇಷ್ಟಲಿಂಗ ಮನುಷ್ಯನ ಶರೀರವನ್ನು ವ್ಯಾಪಿಸಿದೆ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಮೂರು ಮುಖ್ಯವಾಗಿವೆ. ನೋಟದ ಭಕ್ತಿ ಬಸವಣ್ಣನಿಂದಾಯಿತು ಎಂದು ಶಿವಯೋಗಿ ಸಿದ್ಧರಾಮೇಶ್ವರರು ಹೇಳಿದ್ದಾರೆ. ಕೈಯಲ್ಲಿ ಇರುವ ಲಿಂಗ ಮನುಷ್ಯನ ಕಷ್ಟಗಳನ್ನು ನಿವಾರಿಸುತ್ತದೆ. ಲಿಂಗವನ್ನು ಎಡಗೈಯಲ್ಲಿ ಇಟ್ಟು ನಿರೀಕ್ಷಣೆ ಮಾಡಿದರೆ ಏಕಾಗ್ರತೆ ಮೂಡಿ, ಮನಸ್ಸು ನಿರುಮ್ಮಳವಾಗಿ ಭಾವ ಶುದ್ಧಗೊಳ್ಳುವುದು ಅನುಭವಕ್ಕೆ ಬರುತ್ತದೆ’ ಎಂದರು.