ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’1984ರಲ್ಲಿ ನ್ಯಾ.ಚಿನ್ನಪ್ಪರೆಡ್ಡಿ ನೀಡಿದ ವರದಿ ಪ್ರಕಾರ 43 ಉಪಜಾತಿಗಳನ್ನು ಒಳಗೊಂಡು ವೀರಶೈವ ಲಿಂಗಾಯತರ ಜನಸಂಖ್ಯೆ 61.42 ಲಕ್ಷ ಇತ್ತು. ಅದರ ಪ್ರಕಾರವೇ ಲೆಕ್ಕ ಹಾಕಿದರೆ 2016ಕ್ಕೆ 1 ಕೋಟಿ 13 ಲಕ್ಷದ 70 ಸಾವಿರ ಆಗಬೇಕು. ಆದರೆ ಕಾಂತರಾಜ್ ಆಯೋಗದ ವರದಿಯಲ್ಲಿ 107 ಉಪಜಾತಿಗಳನ್ನು ಗುರುತಿಸಿದ್ದು, ಸಮಾಜದ ಜನಸಂಖ್ಯೆಯನ್ನು 59 ಲಕ್ಷಕ್ಕೆ ಕುಸಿದಿದೆ. ಇವರು ಸಮೀಕ್ಷೆಗೆ ಮನೆ, ಮನೆಗೂ ಬಂದಿಲ್ಲ, ವರದಿ ತಯಾರಿ ಎಲ್ಲಿ ಮಾಡಿದರು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಹಾಗಾಗಿ ಈ ವರದಿ ಜಾರಿಯಾಗಬಾರದು. ಇದರ ವಿರುದ್ಧ ರಕ್ತಪತ್ರ ಚಳವಳಿ ನಡೆಸುತ್ತೇವೆ. ಇನ್ನೊಮ್ಮೆ ಸಮೀಕ್ಷೆ ಮಾಡುವ ಅಗತ್ಯವಿದೆ‘ ಎಂದು ಹೇಳಿದರು.