ಚಿಂಚೋಳಿ ತಾಲ್ಲೂಕಿನಲ್ಲಿ 34, ಸೇಡಂ ತಾಲ್ಲೂಕಿನಲ್ಲಿ 28, ಶಹಾಬಾದ್ ತಾಲ್ಲೂಕಿನಲ್ಲಿ 12 ಹಾಗೂ ಕಲಬುರ್ಗಿ ತಾಲ್ಲೂಕು ಮಾಲಗತ್ತಿಯಲ್ಲಿ ಮೂವರನ್ನು ರಕ್ಷಿಸಲಾಗಿದೆ. ಜೇವರ್ಗಿ ಬಳಿಯ ನರಿಬೋಳ ಗ್ರಾಮದ ಬಳಿ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಯುವಕನ ಪತ್ತೆ ಕಾರ್ಯದಲ್ಲೂ ಎನ್ಡಿಆರ್ಎಫ್ ತೊಡಗಿಸಿಕೊಂಡಿದೆ.