‘ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಚಿಂಚೋಳಿಯಲ್ಲಿ ಪ್ರಾರಂಭಿಸಬಹುದು. ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹಾಗೂ ವಾಣಿಜ್ಯ ಅಧ್ಯಯನ ವಿಭಾಗದ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆಯಲು ಸೂಕ್ತವಾಗಿದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ತರಗತಿ ನಡೆಸಲು ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 7 ಕೊಠಡಿಗಳನ್ನು ಪರಿಶೀಲಿಸಲಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಹರ್ಷ ಉಂಟು ಮಾಡಿತ್ತು. ಆದರೆ, ವರ್ಷ ಕಳೆದರೂ ಅಧ್ಯಯನ ಕೇಂದ್ರ ಇನ್ನೂ ಇಲ್ಲಿ ಆರಂಭಗೊಂಡಿಲ್ಲ.