‘ಹೊಸದಾಗಿ ಆಯುಕ್ತಾಲಯ ರಚನೆಯಾಗಿದ್ದರಿಂದ ಸಿಬ್ಬಂದಿ ಕೊರತೆ ಕಾಡುತ್ತಿದೆ. ಗಸ್ತಿಗಾಗಿ ಹೊಸ ವಾಹನಗಳೂ ವಿವಿಧ ಠಾಣೆಗಳಿಗೆ ಬಂದಿಲ್ಲ. ಹೊಸದಾಗಿ ನೇಮಕವಾದ ಸಿಬ್ಬಂದಿ ತರಬೇತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಅವರ ತರಬೇತಿ ಮುಗಿಸಿ ವಿವಿಧ ಠಾಣೆಗಳಿಗೆ ನಿಯೋಜನೆಗೊಳ್ಳಲಿದ್ದಾರೆ. ಹೊಸ ವಾಹನಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಕೆಆರ್ಡಿಬಿಯಿಂದಲೂ ಜೀಪ್ಗಳ ಖರೀದಿಗೆ ಹಣ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಸತೀಶಕುಮಾರ್ ತಿಳಿಸಿದರು.