ಸಮಾರಂಭ ಆಯೋಜಿಸಿದ್ದ ಬಜಾಜ್ ಕಲ್ಯಾಣ ಮಂಟಪದೊಳಗೆ ಶಾಸಕ ಪ್ರಿಯಾಂಕ್ ಬರುತ್ತಿದ್ದಂತೆ ಖಾಲಿ ಕುರ್ಚಿಗಳ ದರ್ಶನವಾಯಿತು. ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಮಾತ್ರ ಕುಳಿತಿದ್ದರು. ಇಡೀ ಸಭಾಂಗಣ ಖಾಲಿಯಾಗಿರುವುದು ಗಮನಿಸಿದ ಅವರು, ಅಡಿಗಲ್ಲು ಕಾರ್ಯಕ್ರಮವನ್ನು ಖಾಲಿ ಕುರ್ಚಿಗಳು ನೊಡಬೇಕಾ? ಜನರೇ ಇಲ್ಲದೆ ಕಾರ್ಯಕ್ರಮ ಹೇಗೆ ಮಾಡುತ್ತೀರಿ? ಜನರನ್ನು ಸೇರಿಸಲು ನಿಮಗೇನು ತೊಂದರೆ? ಎಂದು ಅವರು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು.