‘ಮೇಲಕೇರಿ ಅವರ ಸಂಬಂಧಿಯೊಬ್ಬರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂ.ಫಿಲ್ ಅಧ್ಯಯನ ಮಾಡುತ್ತಿದ್ದು, ಅವರು ನಿಯಮಾನುಸಾರ ಪೂರ್ಣಾವಧಿಯಾಗಿ ಸಂಶೋಧನೆ ಮಾಡದೇ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಾ, ಎಂ.ಫಿಲ್ ಮಾಡುತ್ತಿದ್ದುದರಿಂದ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಎಂ.ವಿದ್ಯಾಸಾಗರ ಅವರು ಮೇಲಕೇರಿ ಅವರ ಸಂಬಂಧಿ ವಿದ್ಯಾರ್ಥಿಗೆ ಶಿಷ್ಯವೇತನ ಮಂಜೂರು ಮಾಡಲು ಒಪ್ಪಿರಲಿಲ್ಲ. ಇದು ಮೇಲಕೇರಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿಚಾರಿಸಲು ವಿದ್ಯಾಸಾಗರ ಬಳಿ ತೆರಳಿದ್ದ ಮೇಲಕೇರಿ, ಅವರ ಕಪಾಳಕ್ಕೆ ಹೊಡೆದಿದ್ದರು.ಈ ಸಂಬಂಧ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ’ ಎಂದು ವಿವಿ ಮೂಲಗಳು ತಿಳಿಸಿವೆ.