ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಚಾವರಂಗೆ ಪಿಯು ಕಾಲೇಜು ಮಂಜೂರಿಗೆ ಯತ್ನ: ಅವಿನಾಶ ಜಾಧವ

Last Updated 25 ಜನವರಿ 2022, 3:58 IST
ಅಕ್ಷರ ಗಾತ್ರ

ಚಿಂಚೋಳಿ: ಗಡಿಗ್ರಾಮ ಕುಂಚಾವರಂ ಮತ್ತು ತಾಲ್ಲೂಕಿನ ಹೃದಯಭಾಗ ಚಿಮ್ಮನಚೋಡ, ಐನಾಪುರ, ಮೋಘಾ, ರಟಕಲ್ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ಕುರಿತು ಜನರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಪ್ರೌಢ ಶಾಲೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆಎಂದು ಶಾಸಕ ಅವಿನಾಶ ಉಮೇಶ ಜಾಧವ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಚಾವರಂ ಗ್ರಾಮಕ್ಕೆ ಪಿಯು ಕಾಲೇಜು ಅಗತ್ಯವಿತ್ತು. ಆದರೆ ಮೊದಲನೆ ಪಟ್ಟಿಯಲ್ಲಿ ಇದು ಸೇರದಿರುವುದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದಾಗ 2ನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಪರೋಕ್ಷವಾಗಿ ಕುಂಚಾರಂಗೆ ಪಿಯು ಕಾಲೇಜು ಮಂಜೂರು ಮಾಡುವ ಇಂಗಿತ ವ್ಯಕ್ತಪಡಿಸಿದರು.

ಅಶೋಕ ಚವ್ಹಾಣ, ರಾಜು ಪವಾರ್, ಅಲ್ಲಮಪ್ರಭು ಹುಲಿ, ಹಣಮಂತ ಭೋವಿ, ಲಕ್ಷ್ಮಣ ಅವುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT