<p><strong>ಕಲಬುರಗಿ</strong>: ರಾಯಚೂರು ವಲಯ ತಂಡವು ಅಂತರ ಗ್ರಾಮಾಂತರ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾನುವಾರ ಮಂಗಳೂರು ವಲಯ ತಂಡಕ್ಕೆ ಸೋತಿತು.</p>.<p>ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ರಾಯಚೂರು 30.5 ಓವರ್ಗಳಲ್ಲಿ ಕೇವಲ 101 ರನ್ ಗಳಿಸಿ ಎಲ್ಲ ವಿಕೆಟ್ ಕೈಚೆಲ್ಲಿತು. ನಾಯಕ ಪ್ರಭು ಸಸಾಲಟ್ಟಿ (51) ಮಾತ್ರ ಎದುರಾಳಿ ಬೌಲರ್ಗಳಿಗೆ ಅಲ್ಪ ಪ್ರತಿರೋಧ ತೋರಿದರು.</p>.<p>ಸಾಧಾರಣ ಗುರಿ ಬೆನ್ನತ್ತಿದ ಮಂಗಳೂರು, ಆರಂಭದಲ್ಲಿ ಆತಂಕ ಎದುರಿಸಿದರೂ ನಿಹಾಂಶ್ ಪೂಜಾರಿ (ಔಟಾಗದೇ 45) ಅವರ ಬ್ಯಾಟಿಂಗ್ ಬಲದಿಂದ ಗೆಲುವಿನ ದಡ ಸೇರಿತು. ಆ ತಂಡವು 24.2 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.</p>.<p>ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ: 30.5 ಓವರ್ಗಳಲ್ಲಿ 101 (ಪ್ರಭು ಸಸಾಲಟ್ಟಿ 51, ಶ್ರೀಧರ್ ಜಗತಾಪ 13; ಆಶಿಶ್ ನಾಯಕ್ 16ಕ್ಕೆ 5, ಅಮೃತ್ ಪ್ರವೀಣ್ 21ಕ್ಕೆ 3,ನಿಶ್ಚಿತ್ ಪೈ 23ಕ್ಕೆ 2).</p>.<p>ಮಂಗಳೂರು ವಲಯ: 24.2 ಓವರ್ಗಳಲ್ಲಿ 6 ವಿಕೆಟ್ಗೆ 102 (ಅಕ್ಷಯ್ ಕಾಮತ್ 14, ನಿಹಾಂಶ್ ಪೂಜಾರಿ ಔಟಾಗದೇ 45; ರಾಹುಲ್ ಬೆಲ್ಲದ್ 33ಕ್ಕೆ 3). ಫಲಿತಾಂಶ: ಮಂಗಳೂರು ವಲಯ ತಂಡಕ್ಕೆ 4 ವಿಕೆಟ್ಗಳ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ರಾಯಚೂರು ವಲಯ ತಂಡವು ಅಂತರ ಗ್ರಾಮಾಂತರ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾನುವಾರ ಮಂಗಳೂರು ವಲಯ ತಂಡಕ್ಕೆ ಸೋತಿತು.</p>.<p>ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ರಾಯಚೂರು 30.5 ಓವರ್ಗಳಲ್ಲಿ ಕೇವಲ 101 ರನ್ ಗಳಿಸಿ ಎಲ್ಲ ವಿಕೆಟ್ ಕೈಚೆಲ್ಲಿತು. ನಾಯಕ ಪ್ರಭು ಸಸಾಲಟ್ಟಿ (51) ಮಾತ್ರ ಎದುರಾಳಿ ಬೌಲರ್ಗಳಿಗೆ ಅಲ್ಪ ಪ್ರತಿರೋಧ ತೋರಿದರು.</p>.<p>ಸಾಧಾರಣ ಗುರಿ ಬೆನ್ನತ್ತಿದ ಮಂಗಳೂರು, ಆರಂಭದಲ್ಲಿ ಆತಂಕ ಎದುರಿಸಿದರೂ ನಿಹಾಂಶ್ ಪೂಜಾರಿ (ಔಟಾಗದೇ 45) ಅವರ ಬ್ಯಾಟಿಂಗ್ ಬಲದಿಂದ ಗೆಲುವಿನ ದಡ ಸೇರಿತು. ಆ ತಂಡವು 24.2 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.</p>.<p>ಸಂಕ್ಷಿಪ್ತ ಸ್ಕೋರು: ರಾಯಚೂರು ವಲಯ: 30.5 ಓವರ್ಗಳಲ್ಲಿ 101 (ಪ್ರಭು ಸಸಾಲಟ್ಟಿ 51, ಶ್ರೀಧರ್ ಜಗತಾಪ 13; ಆಶಿಶ್ ನಾಯಕ್ 16ಕ್ಕೆ 5, ಅಮೃತ್ ಪ್ರವೀಣ್ 21ಕ್ಕೆ 3,ನಿಶ್ಚಿತ್ ಪೈ 23ಕ್ಕೆ 2).</p>.<p>ಮಂಗಳೂರು ವಲಯ: 24.2 ಓವರ್ಗಳಲ್ಲಿ 6 ವಿಕೆಟ್ಗೆ 102 (ಅಕ್ಷಯ್ ಕಾಮತ್ 14, ನಿಹಾಂಶ್ ಪೂಜಾರಿ ಔಟಾಗದೇ 45; ರಾಹುಲ್ ಬೆಲ್ಲದ್ 33ಕ್ಕೆ 3). ಫಲಿತಾಂಶ: ಮಂಗಳೂರು ವಲಯ ತಂಡಕ್ಕೆ 4 ವಿಕೆಟ್ಗಳ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>