ಮಳೆಯಿಂದ ರೈತರು ಸಂತಸಗೊಂಡಿದ್ದು ತಾಲ್ಲೂಕಿನಲ್ಲಿ ಮುಂಗಾರು ಕೃಷಿ ಚಟುವಟಿಕೆ ಚುರುಕು ಪಡೆಯಲಿವೆ. ಗುಡುಗು, ಮಿಂಚಿನೊಂದಿಗೆ ಸುರಿದ ರೋಹಿಣಿ ಮಳೆ ರೌದ್ರಾವತಾರ ತೋರಿದ್ದು ಮೊದಲ ಮಳೆಗೇ ಹೊಳೆಗಳು ತುಂಬಿ ಹರಿದವು.
ಮಳೆಯಿಂದ ಹೊಲಗಳು ತೊಯ್ದು ತೊಪ್ಪೆಯಾಗಿವೆ. ರಸ್ತೆಗಳು ಕೆಸರು ಕೊಚ್ಚೆಯಾಗಿವೆ. ಚರಂಡಿಗಳು ತುಂಬಿ ಹರಿದಿವೆ.