<p><strong>ಚಿಂಚೋಳಿ</strong>: ಭಾನುವಾರ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಗಳು ಜಲಾವೃತವಾದವು. ಕಟಾವು ಮಾಡಿ ರಾಶಿಗೆ ಹಾಕಿದ ಉದ್ದು ವಿವಿಧೆಡೆ ಮಳೆಗೆ ಆಹುತಿಯಾಗಿದೆ.<br> ನಾಲಾ ನದಿ, ತೊರೆಗಳಲ್ಲಿ ಪ್ರವಾಹ ಕಾಣಿಸಿದ್ದು ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ 2,100 ಕ್ಯುಸೆಕ್ ಒಳಹರಿವು ದಾಖಲಾಗಿದೆ.</p>.<p>‘ಬೆಳಿಗ್ಗೆಯಿಂದಲೇ ಜಲಾಶಯದ ಗೇಟು ತೆರೆದು ಸರನಾಲಾ ನದಿಗೆ 1,200 ಕ್ಯುಸೆಕ್ ನೀರು ಬಿಡಲಾಗಿದೆ’ ಎಂದು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚೇತನ ಕಳಸ್ಕರ್ ತಿಳಿಸಿದ್ದಾರೆ.</p>.<p>ಸದ್ಯ ಜಲಾಶಯದ ನೀರಿನ ಮಟ್ಟ 1616.5 ಅಡಿಯಿದೆ. ನಾಗರಾಳ ಜಲಾಶಯದ ನೀರಿನ ಮಟ್ಟ 490.37 ಮೀಟರ್ ಇದೆ ಎಂದು ಯೋಜನಾಧಿಕಾರಿ ಅರುಣಕುಮಾರ ವಡಗೇರಿ ತಿಳಿಸಿದ್ದಾರೆ.<br> ಮಳೆಯಿಂದ ತಾಲ್ಲೂಕಿನ ಕರ್ಚಖೇಡದಲ್ಲಿ ವ್ಯಕ್ತಿಗೆ ಸಿಡಿಲು ಬಡಿದಿದೆ. ಗಾಯಾಳು ಆನಂದ ಮಾಣಿಕಪ್ಪ ಯಂಪಳ್ಳಿ ಸುಟ್ಟ ಗಾಯಗಳಿಂದ ನರಳುತ್ತಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮದ ಶಂಕರ ಮುತ್ತಂಗಿ ಮತ್ತು ಶ್ರೀನಿವಾಸ ಯಂಪಳ್ಳಿ ತಿಳಿಸಿದ್ದಾರೆ.</p>.<p>ಕುಂಚಾವರಂ 60, ಚಿಂಚೋಳಿ 42, ಕೋಡ್ಲಿ 38, ನಿಡಗುಂದಾ 32, ಸುಲೇಪೇಟ 28, ಐನಾಪುರ 15, ಚಿಮ್ಮನಚೋಡ 12 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಭೂತಪೂರ ಚಿಂತಪಳ್ಳಿ ಮಧ್ಯೆ ಸೇತುವೆ ಮೇಲಿನಿಂದ ನೀರು ಹರಿದು ಕೆಲ ಕಾಲ ಸಂಪರ್ಕ ಕಡಿತವಾಗಿತ್ತು.</p>.<p>ಮಳೆಯಿಂದ ಐನಾಪುರದಲ್ಲಿ 2, ಕುಂಚಾವರಂನಲ್ಲಿ 1 ಮನೆ ಮಳೆಯಿಂದ ಭಾಗಶಃ ಕುಸಿದಿವೆ. ಸುಲೇಪೇಟದಲ್ಲಿ 4 ಮನೆಗಳಿಗೆ ನೀರು ನುಗ್ಗಿದೆ ಎಂದು ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಭಾನುವಾರ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಗಳು ಜಲಾವೃತವಾದವು. ಕಟಾವು ಮಾಡಿ ರಾಶಿಗೆ ಹಾಕಿದ ಉದ್ದು ವಿವಿಧೆಡೆ ಮಳೆಗೆ ಆಹುತಿಯಾಗಿದೆ.<br> ನಾಲಾ ನದಿ, ತೊರೆಗಳಲ್ಲಿ ಪ್ರವಾಹ ಕಾಣಿಸಿದ್ದು ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ 2,100 ಕ್ಯುಸೆಕ್ ಒಳಹರಿವು ದಾಖಲಾಗಿದೆ.</p>.<p>‘ಬೆಳಿಗ್ಗೆಯಿಂದಲೇ ಜಲಾಶಯದ ಗೇಟು ತೆರೆದು ಸರನಾಲಾ ನದಿಗೆ 1,200 ಕ್ಯುಸೆಕ್ ನೀರು ಬಿಡಲಾಗಿದೆ’ ಎಂದು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚೇತನ ಕಳಸ್ಕರ್ ತಿಳಿಸಿದ್ದಾರೆ.</p>.<p>ಸದ್ಯ ಜಲಾಶಯದ ನೀರಿನ ಮಟ್ಟ 1616.5 ಅಡಿಯಿದೆ. ನಾಗರಾಳ ಜಲಾಶಯದ ನೀರಿನ ಮಟ್ಟ 490.37 ಮೀಟರ್ ಇದೆ ಎಂದು ಯೋಜನಾಧಿಕಾರಿ ಅರುಣಕುಮಾರ ವಡಗೇರಿ ತಿಳಿಸಿದ್ದಾರೆ.<br> ಮಳೆಯಿಂದ ತಾಲ್ಲೂಕಿನ ಕರ್ಚಖೇಡದಲ್ಲಿ ವ್ಯಕ್ತಿಗೆ ಸಿಡಿಲು ಬಡಿದಿದೆ. ಗಾಯಾಳು ಆನಂದ ಮಾಣಿಕಪ್ಪ ಯಂಪಳ್ಳಿ ಸುಟ್ಟ ಗಾಯಗಳಿಂದ ನರಳುತ್ತಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮದ ಶಂಕರ ಮುತ್ತಂಗಿ ಮತ್ತು ಶ್ರೀನಿವಾಸ ಯಂಪಳ್ಳಿ ತಿಳಿಸಿದ್ದಾರೆ.</p>.<p>ಕುಂಚಾವರಂ 60, ಚಿಂಚೋಳಿ 42, ಕೋಡ್ಲಿ 38, ನಿಡಗುಂದಾ 32, ಸುಲೇಪೇಟ 28, ಐನಾಪುರ 15, ಚಿಮ್ಮನಚೋಡ 12 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಭೂತಪೂರ ಚಿಂತಪಳ್ಳಿ ಮಧ್ಯೆ ಸೇತುವೆ ಮೇಲಿನಿಂದ ನೀರು ಹರಿದು ಕೆಲ ಕಾಲ ಸಂಪರ್ಕ ಕಡಿತವಾಗಿತ್ತು.</p>.<p>ಮಳೆಯಿಂದ ಐನಾಪುರದಲ್ಲಿ 2, ಕುಂಚಾವರಂನಲ್ಲಿ 1 ಮನೆ ಮಳೆಯಿಂದ ಭಾಗಶಃ ಕುಸಿದಿವೆ. ಸುಲೇಪೇಟದಲ್ಲಿ 4 ಮನೆಗಳಿಗೆ ನೀರು ನುಗ್ಗಿದೆ ಎಂದು ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>