<p><strong>ಕಲಬುರ್ಗಿ: </strong>‘ಪೋಲಿಸ್ ಇಲಾಖೆಯವರಿಗೂ ಒತ್ತಡಮಯ ಜೀವನವಿರುತ್ತದೆ. ಅದನ್ನು ತಡೆಯಲು ರಾಜಯೋಗ ಖಂಡಿತವಾಗಿಯು ಸಹಯೋಗ ನೀಡುತ್ತದೆ’ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ತಿಳಿಸಿದರು.</p>.<p>ಬ್ರಹ್ಮಾಕುಮಾರಿಸ್ನ ಪ್ರಥಮ ಮುಖ್ಯಸ್ಥೆಯಾದ ರಾಜಯೋಗಿನಿ ಜಗದಂಬಾ ಸರಸ್ವತಿ ಅವರ 56ನೇ ಪುಣ್ಯ ಸ್ಮೃತಿದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾನು ನಾಲ್ಕಾರು ಕಡೆ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಕಲಾಪಗಳನ್ನು ನೋಡಿದ್ದೇನೆ. ಇವರ ತ್ಯಾಗ ಹಾಗೂ ಸೇವಾ ಮನೋಭಾವನೆ ಶ್ಲಾಘನೀಯ. ಕಲಬುರ್ಗಿಯಲ್ಲಿ ಇಷ್ಟು ದೊಡ್ಡ ಹಾಗೂ ಶಾಂತಿಯುತ ವಾತಾವರಣ ಇರಬಹುದೆಂದು ನನಗೆ ಅನಿಸಿರಲಿಲ್ಲ. ಕಲಬುರ್ಗಿ ಜನತೆಗೆ ಇದೊಂದು ಅಪರೂಪದ ಕೊಡುಗೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ನಗರದ ಕೇಂದ್ರಗಳ ಬ್ರಹ್ಮಾಕುಮಾರ ಕುಮಾರಿಯರಾದ ರಾಜೇಶ್ವರಿ, ನೀಲಕ್ಕ, ಶಕುಂತಲಾ, ತೆಲಂಗಾಣದ ವನಪರ್ತಿಯ ಶೋಭಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಲೀಲಾ ನಿರ್ವಹಣೆ ಮಾಡಿದರು.</p>.<p>ಕಲಬುರ್ಗಿ ವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ಸನ್ಮಾನಿಸಿ ಸ್ವಾಗತಿಸಿದರು. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>‘ಪೋಲಿಸ್ ಇಲಾಖೆಯವರಿಗೂ ಒತ್ತಡಮಯ ಜೀವನವಿರುತ್ತದೆ. ಅದನ್ನು ತಡೆಯಲು ರಾಜಯೋಗ ಖಂಡಿತವಾಗಿಯು ಸಹಯೋಗ ನೀಡುತ್ತದೆ’ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ತಿಳಿಸಿದರು.</p>.<p>ಬ್ರಹ್ಮಾಕುಮಾರಿಸ್ನ ಪ್ರಥಮ ಮುಖ್ಯಸ್ಥೆಯಾದ ರಾಜಯೋಗಿನಿ ಜಗದಂಬಾ ಸರಸ್ವತಿ ಅವರ 56ನೇ ಪುಣ್ಯ ಸ್ಮೃತಿದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಾನು ನಾಲ್ಕಾರು ಕಡೆ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಕಲಾಪಗಳನ್ನು ನೋಡಿದ್ದೇನೆ. ಇವರ ತ್ಯಾಗ ಹಾಗೂ ಸೇವಾ ಮನೋಭಾವನೆ ಶ್ಲಾಘನೀಯ. ಕಲಬುರ್ಗಿಯಲ್ಲಿ ಇಷ್ಟು ದೊಡ್ಡ ಹಾಗೂ ಶಾಂತಿಯುತ ವಾತಾವರಣ ಇರಬಹುದೆಂದು ನನಗೆ ಅನಿಸಿರಲಿಲ್ಲ. ಕಲಬುರ್ಗಿ ಜನತೆಗೆ ಇದೊಂದು ಅಪರೂಪದ ಕೊಡುಗೆ’ ಎಂದರು.</p>.<p>ಕಾರ್ಯಕ್ರಮದಲ್ಲಿ ನಗರದ ಕೇಂದ್ರಗಳ ಬ್ರಹ್ಮಾಕುಮಾರ ಕುಮಾರಿಯರಾದ ರಾಜೇಶ್ವರಿ, ನೀಲಕ್ಕ, ಶಕುಂತಲಾ, ತೆಲಂಗಾಣದ ವನಪರ್ತಿಯ ಶೋಭಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಲೀಲಾ ನಿರ್ವಹಣೆ ಮಾಡಿದರು.</p>.<p>ಕಲಬುರ್ಗಿ ವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ಸನ್ಮಾನಿಸಿ ಸ್ವಾಗತಿಸಿದರು. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>