<p><strong>ಕಲಬುರಗಿ</strong>: ‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಛಾಯಾಗ್ರಾಹಕರು ಹೋರಾಟ ನಡೆಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.</p>.<p>ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಛಾಯಾಗ್ರಾಹಕರ ಒಗ್ಗಟ್ಟು ಗಮನಿಸಿದರೆ ಖುಷಿಯಾಗುತ್ತದೆ. ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಿನೊಂದಿಗೆ ಹೋರಾಟವೂ ಮುಖ್ಯವಾಗುತ್ತದೆ. ಛಾಯಾಗ್ರಾಹಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಸಾಧ್ಯವಾದಷ್ಟು ಸಹಾಯ ಮಾಡುವೆ’ ಎಂದು ಹೇಳಿದರು.</p>.<p>‘ಮೊಬೈಲ್ ಬಂದ ಮೇಲೆ ಛಾಯಾಗ್ರಾಹಕರ ಬೇಡಿಕೆ ಕಡಿಮೆಯಾಗುತ್ತಿದೆ. ಆಧುನಿಕತೆಗೆ ತಕ್ಕಂತೆ ತಾಂತ್ರಿಕತೆ, ನೈಪುಣ್ಯಕ್ಕೆ ಒತ್ತು ಕೊಡಬೇಕು. ಕಲೆಗೆ ಬೆಲೆ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.</p>.<p>ಹಿರಿಯ ಛಾಯಾಗ್ರಾಹಕ ಮಹಮ್ಮದ್ ಅಯಾಜೊದ್ದೀನ್ ಪಟೇಲ್ ಮಾತನಾಡಿ, ‘ಛಾಯಾಗ್ರಾಹಕರಿಗೆ ಅವಕಾಶಗಳು ಸಿಗುವುದು ಕಡಿಮೆ. ಆದರೆ ಸಿಕ್ಕ ಅವಕಾಶದಲ್ಲೇ ಅವರು ಜಗತ್ತನ್ನು ಬದಲಾಯಿಸುವ ಶಕ್ತಿಯುಳ್ಳವರು. ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸುವುದರಲ್ಲಿ ಸಂಘಟನೆಯವರ ಶ್ರಮ ದೊಡ್ಡದು’ ಎಂದರು.</p>.<p>ಉದ್ಯಮಿ ಸತೀಶ ಗುತ್ತೇದಾರ, ಡಾ. ಅಜಯ್, ಎಂ.ಎನ್. ಎಸ್. ಶಾಸ್ತ್ರಿ, ವಿಜಯಕುಮಾರ್ ಪುರಾಣಿಕ್, ಪ್ರಭು ಪೂಜಾರಿ, ರಮೇಶ ಪಾಟೀಲ, ಸೋಮಶೇಖರ ಸಿಂಪಿ, ಶ್ರೀನಿವಾಸ ಜೋಶಿ, ಸಂಘದ ತಾಲ್ಲೂಕು ಘಟಕಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<p>ನಾಗೇಂದ್ರ ಸಕ್ಕರಗಿ ಸ್ವಾಗತಿಸಿದರು. ಅನೀಶಾ ಕುಲಕರ್ಣಿ ನಿರೂಪಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ತೋಟದ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಛಾಯಾಗ್ರಾಹಣ ಪ್ರಕ್ರಿಯೆ ಕಂಡುಹಿಡಿದ ಫ್ರಾನ್ಸ್ನ ಲೂಯಿಸ್ ಡಾಗೆರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು. ಇದೇ ವೇಳೆ 15 ಮಂದಿಗೆ ಕಲ್ಯಾಣ ಕರ್ನಾಟಕ ಛಾಯಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆಯಲು ಛಾಯಾಗ್ರಾಹಕರು ಹೋರಾಟ ನಡೆಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಮರಗೋಳ ಹೇಳಿದರು.</p>.<p>ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಛಾಯಾಗ್ರಾಹಕರ ಒಗ್ಗಟ್ಟು ಗಮನಿಸಿದರೆ ಖುಷಿಯಾಗುತ್ತದೆ. ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಿನೊಂದಿಗೆ ಹೋರಾಟವೂ ಮುಖ್ಯವಾಗುತ್ತದೆ. ಛಾಯಾಗ್ರಾಹಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಸಾಧ್ಯವಾದಷ್ಟು ಸಹಾಯ ಮಾಡುವೆ’ ಎಂದು ಹೇಳಿದರು.</p>.<p>‘ಮೊಬೈಲ್ ಬಂದ ಮೇಲೆ ಛಾಯಾಗ್ರಾಹಕರ ಬೇಡಿಕೆ ಕಡಿಮೆಯಾಗುತ್ತಿದೆ. ಆಧುನಿಕತೆಗೆ ತಕ್ಕಂತೆ ತಾಂತ್ರಿಕತೆ, ನೈಪುಣ್ಯಕ್ಕೆ ಒತ್ತು ಕೊಡಬೇಕು. ಕಲೆಗೆ ಬೆಲೆ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.</p>.<p>ಹಿರಿಯ ಛಾಯಾಗ್ರಾಹಕ ಮಹಮ್ಮದ್ ಅಯಾಜೊದ್ದೀನ್ ಪಟೇಲ್ ಮಾತನಾಡಿ, ‘ಛಾಯಾಗ್ರಾಹಕರಿಗೆ ಅವಕಾಶಗಳು ಸಿಗುವುದು ಕಡಿಮೆ. ಆದರೆ ಸಿಕ್ಕ ಅವಕಾಶದಲ್ಲೇ ಅವರು ಜಗತ್ತನ್ನು ಬದಲಾಯಿಸುವ ಶಕ್ತಿಯುಳ್ಳವರು. ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸುವುದರಲ್ಲಿ ಸಂಘಟನೆಯವರ ಶ್ರಮ ದೊಡ್ಡದು’ ಎಂದರು.</p>.<p>ಉದ್ಯಮಿ ಸತೀಶ ಗುತ್ತೇದಾರ, ಡಾ. ಅಜಯ್, ಎಂ.ಎನ್. ಎಸ್. ಶಾಸ್ತ್ರಿ, ವಿಜಯಕುಮಾರ್ ಪುರಾಣಿಕ್, ಪ್ರಭು ಪೂಜಾರಿ, ರಮೇಶ ಪಾಟೀಲ, ಸೋಮಶೇಖರ ಸಿಂಪಿ, ಶ್ರೀನಿವಾಸ ಜೋಶಿ, ಸಂಘದ ತಾಲ್ಲೂಕು ಘಟಕಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<p>ನಾಗೇಂದ್ರ ಸಕ್ಕರಗಿ ಸ್ವಾಗತಿಸಿದರು. ಅನೀಶಾ ಕುಲಕರ್ಣಿ ನಿರೂಪಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ತೋಟದ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಛಾಯಾಗ್ರಾಹಣ ಪ್ರಕ್ರಿಯೆ ಕಂಡುಹಿಡಿದ ಫ್ರಾನ್ಸ್ನ ಲೂಯಿಸ್ ಡಾಗೆರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಆರಂಭಿಸಲಾಯಿತು. ಇದೇ ವೇಳೆ 15 ಮಂದಿಗೆ ಕಲ್ಯಾಣ ಕರ್ನಾಟಕ ಛಾಯಾಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>