ಪಡಿತರ ಅಕ್ಕಿಯನ್ನು ಕಾಳ ಸಂತೆಗೆ ಸಾಗಿಸಲಾಗುತ್ತಿದೆ ಎಂದು ಇಲಾಖೆಯ ಸಹಾಯವಾಣಿಗೆ ಬಂದ ಮಾಹಿತಿಯನ್ನು ಆಧರಿಸಿ ಆಹಾರ ಇಲಾಖೆ ಇನ್ಸ್ಪೆಕ್ಟರ್ ಭಾರತಿ ಸೂರ್ಯಕಾಂತ ಪಾಟೀಲ ಅವರ ನೇತೃತ್ವದಲ್ಲಿ ಅಮರೇಶ, ಶ್ರೀನಿವಾಸ ಇತರ ಅಧಿಕಾರಿಗಳು ಕೂಡಿಕೊಂಡು ನಗರದ ರಾಮ ಮಂದಿರ ಬಳಿಯಲ್ಲಿ ಶೋಧ ನಡೆಸಿದಾಗ, ಅಲ್ಲಿನ ಹೋಟೆಲ್ ಮುಂಭಾಗದಲ್ಲಿ ಲಾರಿಯೊಂದು ಲೋಡ್ ಮಾಡಿಕೊಂಡು ನಿಂತಿದ್ದನ್ನು ಕಂಡು ವಿಚಾರಣೆ ನಡೆಸಿದರು. ಅಧಿಕಾರಿಗಳು ಬರುವ ಮಾಹಿತಿ ಪಡೆದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ವಿಶ್ವವಿದ್ಯಾಲ ಠಾಣೆಗೆ ಮಾಹಿತಿ ನೀಡಿದ್ದಾರೆ.