ಪುರಾತನ ಅಥವಾ ಪಾಳುಬಿದ್ದ ಬಾವಿಗಳ ದುರಸ್ತಿ ಕೆಲಸವನ್ನು ಮಾಡಲು ನರೇಗಾ ಅನುದಾನದಲ್ಲಿ ಅವಕಾಶ ಇರುವುದರಿಂದ ಗ್ರಾಮದಲ್ಲಿ ಇಂತಹ ಕೆಲಸ ಮಾಡಲು ಅನುಕೂಲವಾಗಿದೆ. ನರೇಗಾದಡಿ ಸಾರ್ವಜನಿಕ ಬಾವಿಗಳ ಮತ್ತು ಕೆರೆಗಳ ಹೂಳೆತ್ತುವ ಕೆಲಸ ಮಾಡಲಾಗುತ್ತದೆ. ಇದರಿಂದ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ಗ್ರಾ.ಪಂ ಸದಸ್ಯರಾದ ರಾವುತಪ್ಪ ಗೌಡಗಾಂವ್, ದತ್ತಪ್ಪ ಟೆಂಗಳೆ, ಮಲ್ಲಿಕಾರ್ಜುನ ಸಣ್ಣದಾನಿ ತಿಳಿಸಿದರು.