‘ಶನಿವಾರ ನಸುಕಿನ 4ಕ್ಕೆ ಸ್ನೇಹಿತರು ಫೋನ್ ಮಾಡಿ ಕರೆಸಿಕೊಂಡಿದ್ದರು. ಎಲ್ಲರೂ ಸೇರಿಕೊಂಡು ಸಾರಾಯಿ ಕುಡಿದು, ಗಾಂಜಾ ಸೇರಿದ್ದರು. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಜಗಳ ನಡೆದಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಕಸದ ತೊಟ್ಟಿಯಲ್ಲಿ ಶವ ಎಸೆದು, ಅದರ ಮೇಲೆ ಕಸ ಹಾಕಿ ಪರಾರಿಯಾಗಿದ್ದಾರೆ’ ಎಂದೂ ಮೂಲಗಳು ಮಾಹಿತಿ ನೀಡಿವೆ.