ರಾತ್ರಿ ಗಸ್ತಿನಲ್ಲಿ ಇದ್ದ ಹೆಡ್ ಕಾನ್ಸ್ಟೆಬಲ್ ರೇವಣಸಿದ್ದಪ್ಪ ಮತ್ತು ಕಾನ್ಸ್ಟೆಬಲ್ ಶ್ರೀನಾಥ ಅವರು, ಕಂದಗೋಳ ಕ್ರಾಸ್ ಸಮೀಪ ಸರಕು ವಾಹನ ತಡೆದರು. ಆರೋಪಿಗಳು ವಾಹನದಲ್ಲಿನ ನಾಲ್ಕು ಜಾನುವಾರುಗಳ ಕಾಲು ಮತ್ತು ಬಾಯಿಗೆ ಹಗ್ಗು ಕಟ್ಟಿ ಬೀದರ್ನ ಬಸವಕಲ್ಯಾಣದ ಸಂತೆಗೆ ಸಾಗಿಸುತ್ತಿರುವುದಾಗಿ ಹೇಳಿದರು. ಆದರೆ, ಅವರ ಬಳಿ ಸೂಕ್ತ ದಾಖಲಾತಿಗಳು ಇರಲಿಲ್ಲ. ಹೀಗಾಗಿ, ವಾಹನ ಮತ್ತು ₹ 61 ಸಾವಿರ ಮೌಲ್ಯದ ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.