<p><strong>ಯಡ್ರಾಮಿ:</strong> ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ನಿರಾತಂಕವಾಗಿ ನಡೆದಿದ್ದು, ಇದನ್ನು ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.</p>.<p>ಪಟ್ಟಣದ ದುಮ್ಮದ್ರಿ, ಕಡಕೋಳ, ಖೈನೂರ, ಯತ್ನಾಳ, ವಡಗೇರಾ ಸೇರಿದಂತೆ ಹಲವು ಗ್ರಾಮಗಳ ಹಳ್ಳಗಳಿಂದ ನಿತ್ಯ ಸಾವಿರಾರು ಟ್ರ್ಯಾಕ್ಟರ್ಗಳಲ್ಲಿ ಮರಳು ತುಂಬಿಕೊಂಡು ಸಾಗಿಸಲಾಗುತ್ತಿದೆ.</p>.<p>ಜೇವರ್ಗಿಗೆ ಹೊಸದಾಗಿ ಬಂದ ಸರ್ಕಲ್ ಇನ್ಸ್ಪೆಕ್ಟರ್ ರಮೇಶ ರೊಟ್ಟಿ ಈ ಭಾಗದಲ್ಲಿ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಇದಕ್ಕೆ ಯಾರೂ ಕಡಿವಾಣ ಹಾಕಲಿಲ್ಲ ಎಂದು ಸ್ಥಳೀಯರು ಟೀಕಿಸುತ್ತಾರೆ.</p>.<p>ಹಗಲು ರಾತ್ರಿಯೆನ್ನದೆ ನೂರಾರು ಟ್ರ್ಯಾಕ್ಟರ್ಗಳು ಸಂಚರಿಸುವುದರಿಂದ ವಡಗೇರಾ, ಮಳ್ಳಿ, ದುಮ್ಮದ್ರಿ, ಸುಂಬಡ, ಕಾಚಾಪುರ ಗ್ರಾಮಗಳ ಜನರಿಗೆ ನಿದ್ರಿಸಲು ತೀವ್ರ ತೊಂದರೆಯಾಗುತ್ತಿದೆ.</p>.<p>ದುಮ್ಮದ್ರಿ ಗ್ರಾಮದ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ವಿಜಯಪುರ ಜಿಲ್ಲೆಯ ಸಿಂದಗಿ, ಗೋಲಗೇರಿ, ಯಂಕಂಚಿ, ಯಾದಗಿರಿ ಜಿಲ್ಲೆಯ ಕೆಂಭಾವಿ, ಯಾಳವಾರ, ಹದನೂರ ಸೇರಿದಂತೆ ಹಲವು ಕಡೆ ಮರಳನ್ನು ಇಲ್ಲಿಂದ ಸಾಗಣೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿರುವ ಮನೆಗಳಿಗಿಂತಲೂ ಟ್ರ್ಯಾಕ್ಟರ್ಗಳ ಸಂಖ್ಯೆಯೇ ಜಾಸ್ತಿ ಇದೆ. ಗ್ರಾಮದ ಹಳ್ಳದಲ್ಲಿ ಕೆಂಪು ಮರಳು ಸಿಗುತ್ತಿರುವುದರಿಂದ ಪ್ರತಿ ಟ್ರ್ಯಾಕ್ಟರ್ಗೆ ₹5ರಿಂದ ₹6 ಸಾವಿರ ತೆಗೆದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಡ್ರಾಮಿ:</strong> ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ನಿರಾತಂಕವಾಗಿ ನಡೆದಿದ್ದು, ಇದನ್ನು ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.</p>.<p>ಪಟ್ಟಣದ ದುಮ್ಮದ್ರಿ, ಕಡಕೋಳ, ಖೈನೂರ, ಯತ್ನಾಳ, ವಡಗೇರಾ ಸೇರಿದಂತೆ ಹಲವು ಗ್ರಾಮಗಳ ಹಳ್ಳಗಳಿಂದ ನಿತ್ಯ ಸಾವಿರಾರು ಟ್ರ್ಯಾಕ್ಟರ್ಗಳಲ್ಲಿ ಮರಳು ತುಂಬಿಕೊಂಡು ಸಾಗಿಸಲಾಗುತ್ತಿದೆ.</p>.<p>ಜೇವರ್ಗಿಗೆ ಹೊಸದಾಗಿ ಬಂದ ಸರ್ಕಲ್ ಇನ್ಸ್ಪೆಕ್ಟರ್ ರಮೇಶ ರೊಟ್ಟಿ ಈ ಭಾಗದಲ್ಲಿ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಇದಕ್ಕೆ ಯಾರೂ ಕಡಿವಾಣ ಹಾಕಲಿಲ್ಲ ಎಂದು ಸ್ಥಳೀಯರು ಟೀಕಿಸುತ್ತಾರೆ.</p>.<p>ಹಗಲು ರಾತ್ರಿಯೆನ್ನದೆ ನೂರಾರು ಟ್ರ್ಯಾಕ್ಟರ್ಗಳು ಸಂಚರಿಸುವುದರಿಂದ ವಡಗೇರಾ, ಮಳ್ಳಿ, ದುಮ್ಮದ್ರಿ, ಸುಂಬಡ, ಕಾಚಾಪುರ ಗ್ರಾಮಗಳ ಜನರಿಗೆ ನಿದ್ರಿಸಲು ತೀವ್ರ ತೊಂದರೆಯಾಗುತ್ತಿದೆ.</p>.<p>ದುಮ್ಮದ್ರಿ ಗ್ರಾಮದ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ವಿಜಯಪುರ ಜಿಲ್ಲೆಯ ಸಿಂದಗಿ, ಗೋಲಗೇರಿ, ಯಂಕಂಚಿ, ಯಾದಗಿರಿ ಜಿಲ್ಲೆಯ ಕೆಂಭಾವಿ, ಯಾಳವಾರ, ಹದನೂರ ಸೇರಿದಂತೆ ಹಲವು ಕಡೆ ಮರಳನ್ನು ಇಲ್ಲಿಂದ ಸಾಗಣೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿರುವ ಮನೆಗಳಿಗಿಂತಲೂ ಟ್ರ್ಯಾಕ್ಟರ್ಗಳ ಸಂಖ್ಯೆಯೇ ಜಾಸ್ತಿ ಇದೆ. ಗ್ರಾಮದ ಹಳ್ಳದಲ್ಲಿ ಕೆಂಪು ಮರಳು ಸಿಗುತ್ತಿರುವುದರಿಂದ ಪ್ರತಿ ಟ್ರ್ಯಾಕ್ಟರ್ಗೆ ₹5ರಿಂದ ₹6 ಸಾವಿರ ತೆಗೆದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>