‘ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಪಶುಚಿಕಿತ್ಸಾ ಸೇವೆಗಳಿಗಾಗಿ 3,898 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ ಎಲ್ಲ ದೂರುಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ರಾಜ್ಯದಲ್ಲಿ ಕುರಿಗಳು ಸಾವಿಗೀಡಾದ ಪ್ರಕರಣದಲ್ಲಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದೆ. 3 ರಿಂದ 6ತಿಂಗಳ ಮರಿಗಳಿಗೆ ₹ 3,500, 6 ತಿಂಗಳ ಮೇಲ್ಪಟ್ಟ ಕುರಿ/ ಮೇಕೆಗಳಿಗೆ ₹ 5 ಸಾವಿರ ಪರಿಹಾರ ಧನ ನೀಡಲು ಕ್ರಮವಹಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.