ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿನ ಹೆದ್ದಾರಿಯಾದ ಕಲಬುರಗಿ–ಶಹಾಬಾದ್ ರಸ್ತೆ!

ಅಲ್ಲಲ್ಲಿ ಬಲಿ ಪಡೆಯಲು ಕಾದಿರುವ ಗುಂಡಿಗಳು, ಹಲವು ಬೈಕ್‌ಗಳು ಸ್ಕಿಡ್, ಸವಾರರಿಗೆ ಗಾಯ
Published : 7 ಜುಲೈ 2024, 6:35 IST
Last Updated : 7 ಜುಲೈ 2024, 6:35 IST
ಫಾಲೋ ಮಾಡಿ
Comments
ಶಹಾಬಾದ್ –ರಾವೂರ ಮಧ್ಯದಲ್ಲಿ ಉಂಟಾಗಿರುವ ದೊಡ್ಡ ತಗ್ಗಿನಿಂದಾಗಿ ಪ್ರಯಾಣ ದುಸ್ತರವಾಗಿದೆ
ಚಿತ್ರಗಳು: ಸಿದ್ದರಾಜ ಮಲ್ಕಂಡಿ
ಶಹಾಬಾದ್ –ರಾವೂರ ಮಧ್ಯದಲ್ಲಿ ಉಂಟಾಗಿರುವ ದೊಡ್ಡ ತಗ್ಗಿನಿಂದಾಗಿ ಪ್ರಯಾಣ ದುಸ್ತರವಾಗಿದೆ ಚಿತ್ರಗಳು: ಸಿದ್ದರಾಜ ಮಲ್ಕಂಡಿ
ಮೆಹಬೂಬ್ ಖಾನ್
ಮೆಹಬೂಬ್ ಖಾನ್
ರಾವೂರು ಕ್ರಾಸ್‌ನಿಂದ ಕಲಬುರಗಿವರೆಗೆ ರಾಷ್ಟ್ರೀಯ ಹೆದ್ದಾರಿ ಅಧ್ವಾನಗೊಂಡಿದ್ದು ಪ್ರತಿನಿತ್ಯ ಜನರು ಹೆದ್ದಾರಿ ಮೇಲೆ ರಕ್ತ ಚೆಲ್ಲುವುದು ಸಾಮಾನ್ಯವಾಗಿದೆ. ಸ್ವಲ್ಪ ಮೈಮರೆತರೂ ಜೀವಕ್ಕೆ ಕಂಟಕ. ಕೂಡಲೇ ದುರಸ್ತಿ ಮಾಡಬೇಕು
ಮೆಹಬೂಬ್ ಖಾನ್ ಸಾಮಾಜಿಕ ಕಾರ್ಯಕರ್ತ ರಾವೂರು
ಸ್ವಾತಿ ಬೇಕನಾಳ
ಸ್ವಾತಿ ಬೇಕನಾಳ
ಪ್ರತಿದಿನ ಬಸ್‌ನಲ್ಲಿ ಬಂದು ಹೋಗಿ ಮಾಡ್ತೀವಿ. ಹದಗೆಟ್ಟ ರಸ್ತೆಯಿಂದ ವಾಹನಗಳು ಅಡ್ಡಾದಿಡ್ಡಿ ಬರುವುದರಿಂದ ಜೀವಕ್ಕೆ ಆಪತ್ತು ಇದೆ. ಕೂಡಲೇ ಹೆದ್ದಾರಿ ದುರಸ್ತಿ ಮಾಡಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಬೇಕು
ಸ್ವಾತಿ ಬೇಕನಾಳ ಕಾಲೇಜು ವಿದ್ಯಾರ್ಥಿನಿ
ಹೆದ್ದಾರಿ ಪ್ರಾಧಿಕಾರದ ಉದಾಸೀನ
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಅಂದಿನ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಈ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿ ರಸ್ತೆ ನಿರ್ಮಾಣ ಮಾಡಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ರಸ್ತೆಯ ನಿರ್ವಹಣೆ ಸರಿಯಾಗಿಲ್ಲ.  ಶಹಾಬಾದ್‌ನ ಶಂಕರವಾಡಿ ಬಳಿ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಪಕ್ಕದ ಸರ್ವಿಸ್ ರಸ್ತೆ ಅಲ್ಲಿಂದ ಮುಂದೆ ಎತ್ತರದ ಸೇತುವೆಯ ಪಕ್ಕದಲ್ಲಿನ ಸರ್ವಿಸ್ ರಸ್ತೆ ವಾಡಿಯ ಬಲರಾಮ್ ಚೌಕದ ಬಳಿ ರೈಲ್ವೆ ಹಳಿ ಪಕ್ಕದಲ್ಲಿನ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮರ್ಪಕವಾಗಿ ನಿರ್ವಹಣೆ ಮಾಡದ್ದರಿಂದ ಹಲವು ಅಪಘಾತಗಳು ಸಂಭವಿಸಿವೆ. ಪ್ರಯಾಣವೂ ನಿಧಾನವಾಗಿದೆ. ಈ ಬಗ್ಗೆ ದಿಶಾ ಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾಪವಾಗಿದೆ. ಆದರೂ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಪ್ರಾಧಿಕಾರದ ಅಧಿಕಾರಿಗಳು ವರ್ತಿಸುತ್ತಾರೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬರುತ್ತಿದೆ.  ಹೆದ್ದಾರಿ ನಿರ್ವಹಣೆ ಮಾಡದಿರುವ ಕುರಿತು ಪ್ರತಿಕ್ರಿಯೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಯತ್ನಿಸಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT