<p><strong>ಕಲಬುರಗಿ:</strong> ನಗರದ ಬಿದ್ದಾಪುರ ಕಾಲೊನಿಯಲ್ಲಿ ಶುಕ್ರವಾರ ಆದಿ ಶಂಕರಾಚಾರ್ಯರ ಅಷ್ಟೋತ್ತರ ಸೇವಾ ಸಮಿತಿ ಹಾಗೂ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠ ವತಿಯಿಂದ ಶಂಕರ ಜಯಂತಿ ಪ್ರಯುಕ್ತ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮ ನಡೆಯಿತು.</p>.<p>ನಗರದ ವೈದಿಕರು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ 13 ವಟುಗಳಿಗೆ ಉಪನಯನ (ಬ್ರಹ್ಮೋಪದೇಶ) ಮಾಡಲಾಯಿತು.</p>.<p>ಕಲಬುರಗಿ ನಗರ ಅಲ್ಲದೇ ಸಿಂದಗಿ, ಚಿತ್ತಾಪುರ, ಜಹೀರಾಬಾದ, ಹುಣಸಗಿ ಸೇರಿದಂತೆ ಇತರೆ ಗ್ರಾಮಗಳಿಂದ ವಟುಗಳು ಭಾಗವಹಿಸಿದ್ದರು.</p>.<p>ಸಂಜೆ ಜೇವರ್ಗಿ ಕಾಲೊನಿಯಿಂದ ಬಿದ್ದಾಪು ಕಾಲೊನಿವರೆಗೆ ಶೋಭಾ ಯಾತ್ರೆ ನಡೆಯಿತು ಎಂದು ಅಷ್ಟೋತ್ತರ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಕುಲಕರ್ಣಿ ನಾಗೂರ ತಿಳಿಸಿದ್ದಾರೆ.</p>.<p>ರಮಾಕಾಂತ ಜೋಶಿ, ಶ್ರೀಪಾದ ಜೋಶಿ, ಸದಾನಂದ ಮೋಗೇಕರ್, ಕಿಶೋರ ಕುಲಕರ್ಣಿ ಗೂಳನೂರ, ವೇಣುಗೋಪಾಲ ಗೊಬ್ಬುರ, ದತ್ತಾತ್ರೇಯ ಭೀಸೆ, ದಿಗಂಬರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ನಾಲವಾರ, ಲಕ್ಷ್ಮಣಭಟ್ಟ ರಾಜ ಜೋಶಿ, ಬಿದ್ದಾಪುರ ಕಾಲೊನಿಯ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ನಗರದ ಬಿದ್ದಾಪುರ ಕಾಲೊನಿಯಲ್ಲಿ ಶುಕ್ರವಾರ ಆದಿ ಶಂಕರಾಚಾರ್ಯರ ಅಷ್ಟೋತ್ತರ ಸೇವಾ ಸಮಿತಿ ಹಾಗೂ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠ ವತಿಯಿಂದ ಶಂಕರ ಜಯಂತಿ ಪ್ರಯುಕ್ತ ಸಾಮೂಹಿಕ ಉಚಿತ ಉಪನಯನ ಕಾರ್ಯಕ್ರಮ ನಡೆಯಿತು.</p>.<p>ನಗರದ ವೈದಿಕರು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ 13 ವಟುಗಳಿಗೆ ಉಪನಯನ (ಬ್ರಹ್ಮೋಪದೇಶ) ಮಾಡಲಾಯಿತು.</p>.<p>ಕಲಬುರಗಿ ನಗರ ಅಲ್ಲದೇ ಸಿಂದಗಿ, ಚಿತ್ತಾಪುರ, ಜಹೀರಾಬಾದ, ಹುಣಸಗಿ ಸೇರಿದಂತೆ ಇತರೆ ಗ್ರಾಮಗಳಿಂದ ವಟುಗಳು ಭಾಗವಹಿಸಿದ್ದರು.</p>.<p>ಸಂಜೆ ಜೇವರ್ಗಿ ಕಾಲೊನಿಯಿಂದ ಬಿದ್ದಾಪು ಕಾಲೊನಿವರೆಗೆ ಶೋಭಾ ಯಾತ್ರೆ ನಡೆಯಿತು ಎಂದು ಅಷ್ಟೋತ್ತರ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಕುಲಕರ್ಣಿ ನಾಗೂರ ತಿಳಿಸಿದ್ದಾರೆ.</p>.<p>ರಮಾಕಾಂತ ಜೋಶಿ, ಶ್ರೀಪಾದ ಜೋಶಿ, ಸದಾನಂದ ಮೋಗೇಕರ್, ಕಿಶೋರ ಕುಲಕರ್ಣಿ ಗೂಳನೂರ, ವೇಣುಗೋಪಾಲ ಗೊಬ್ಬುರ, ದತ್ತಾತ್ರೇಯ ಭೀಸೆ, ದಿಗಂಬರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ನಾಲವಾರ, ಲಕ್ಷ್ಮಣಭಟ್ಟ ರಾಜ ಜೋಶಿ, ಬಿದ್ದಾಪುರ ಕಾಲೊನಿಯ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>