<p><strong>ಕಲಬುರಗಿ:</strong> ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶರಣಬಸವೇಶ್ವರರ 4ನೇ ಜಾತ್ರಾ ಮಹೋತ್ಸವದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.</p>.<p>ಮಳೇಂದ್ರ ಶಿವಾಚಾರ್ಯ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಪಾಳಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.</p>.<p>ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ರಥದಲ್ಲಿ ಶರಣಬಸವೇಶ್ವರರ ಮೂರ್ತಿ ಇರಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಹಾಕಿದರು. ಮಕ್ಕಳು, ವೃದ್ಧರು, ಮಹಿಳೆಯರು ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ 3ರಿಂದ ಜಮಾಯಿಸಿದ್ದರು. ಸಂಜೆ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡು, ರಥಕ್ಕೆ ಹಣ್ಣು, ಬಾಳೆ ಹಣ್ಣು, ಫಲಪುಷ್ಪ ಸಮರ್ಪಿಸಿದರು.</p>.<p>ರಥೋತ್ಸವ ವೇಳೆ ಕಳಸ, ಡೊಳ್ಳು ಕುಣಿತ, ವಾದ್ಯಗಳು, ನಂದಿಕೋಲು, ಅಕ್ಕಮಹಾದೇವಿ ಭಜನಾ ಮಂಡಳಿ ಸಮೇತ ಮೆರವಣಿಗೆ ನಡೆಯಿತು.</p>.<p>ಶರಣಗೌಡ ಪಾಟೀಲ, ಸಂತೋಷ ಬಿ.ಪಾಟೀಲ ಪಾಳಾ, ಸುಪ್ರೀತ್ ಚವಣ, ಸಂಗಮೇಶ ರಜೋಳ ಪಾಳಾ ನೇತೃತ್ವದ ವಹಿಸಿದ್ದರು. ಬಾಪೂಗೌಡ ಪಾಟೀಲ, ಬಸವರಾಜ ಗೌನಳ್ಳಿ, ಶಾಂತು, ಶರಣು, ಕರುಣಯ್ಯ ಸ್ವಾಮಿ, ಚಂದಯ್ಯ ಗುತ್ತೇದಾರ, ವಿಶ್ವನಾಥ ಸಾವಕಾರ, ಖೇಮಲಿಂಗ ಬಸಯ್ಯ ಸ್ವಾಮಿ, ನಾಗಯ್ಯ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ತಾಲ್ಲೂಕಿನ ಪಾಳಾ ಗ್ರಾಮದಲ್ಲಿ ಶರಣಬಸವೇಶ್ವರರ 4ನೇ ಜಾತ್ರಾ ಮಹೋತ್ಸವದ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.</p>.<p>ಮಳೇಂದ್ರ ಶಿವಾಚಾರ್ಯ ಮಠದ ಡಾ. ಗುರುಮೂರ್ತಿ ಶಿವಾಚಾರ್ಯರು ಪಾಳಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.</p>.<p>ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡ ರಥದಲ್ಲಿ ಶರಣಬಸವೇಶ್ವರರ ಮೂರ್ತಿ ಇರಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಹಾಕಿದರು. ಮಕ್ಕಳು, ವೃದ್ಧರು, ಮಹಿಳೆಯರು ದೇವಸ್ಥಾನದ ಪ್ರಾಂಗಣದಲ್ಲಿ ಮಧ್ಯಾಹ್ನ 3ರಿಂದ ಜಮಾಯಿಸಿದ್ದರು. ಸಂಜೆ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡು, ರಥಕ್ಕೆ ಹಣ್ಣು, ಬಾಳೆ ಹಣ್ಣು, ಫಲಪುಷ್ಪ ಸಮರ್ಪಿಸಿದರು.</p>.<p>ರಥೋತ್ಸವ ವೇಳೆ ಕಳಸ, ಡೊಳ್ಳು ಕುಣಿತ, ವಾದ್ಯಗಳು, ನಂದಿಕೋಲು, ಅಕ್ಕಮಹಾದೇವಿ ಭಜನಾ ಮಂಡಳಿ ಸಮೇತ ಮೆರವಣಿಗೆ ನಡೆಯಿತು.</p>.<p>ಶರಣಗೌಡ ಪಾಟೀಲ, ಸಂತೋಷ ಬಿ.ಪಾಟೀಲ ಪಾಳಾ, ಸುಪ್ರೀತ್ ಚವಣ, ಸಂಗಮೇಶ ರಜೋಳ ಪಾಳಾ ನೇತೃತ್ವದ ವಹಿಸಿದ್ದರು. ಬಾಪೂಗೌಡ ಪಾಟೀಲ, ಬಸವರಾಜ ಗೌನಳ್ಳಿ, ಶಾಂತು, ಶರಣು, ಕರುಣಯ್ಯ ಸ್ವಾಮಿ, ಚಂದಯ್ಯ ಗುತ್ತೇದಾರ, ವಿಶ್ವನಾಥ ಸಾವಕಾರ, ಖೇಮಲಿಂಗ ಬಸಯ್ಯ ಸ್ವಾಮಿ, ನಾಗಯ್ಯ ಗುತ್ತೇದಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>