ಮಂಗಳವಾರ, 3 ಮಾರ್ಚ್ 2026
×
ADVERTISEMENT

ಕಲಬುರಗಿ | ಶರಣಬಸವೇಶ್ವರರ ರಥೋತ್ಸವ ಮಾ.8ರಂದು: ದಾಕ್ಷಾಯಣಿ

204ನೇ ಮಹಾದಾಸೋಹ ಯಾತ್ರಾ ಮಹೋತ್ಸವ: 7 ರಂದು ಸಂಜೆ 6 ಗಂಟೆಗೆ ಉಚ್ಚಾಯ
Published : 3 ಮಾರ್ಚ್ 2026, 4:45 IST
Last Updated : 3 ಮಾರ್ಚ್ 2026, 4:45 IST
ADVERTISEMENT
ಫಾಲೋ ಮಾಡಿ
Comments
ಬಸವರಾಜ ದೇಶಮುಖ
ಬಸವರಾಜ ದೇಶಮುಖ
ರಥೋತ್ಸವ ವೇಳೆಯಲ್ಲಿ ಎಲ್ಲ ಭಕ್ತರು ಶಾಂತಿ ಮತ್ತು ಶಿಸ್ತಿನಿಂದ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕೈಜೊಡಿಸಬೇಕು 
ದಾಕ್ಷಾಯಣಿ ಎಸ್. ಅಪ್ಪ  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ 
ದೊಡ್ಡಪ್ಪ ಎಸ್‌.ಅಪ್ಪ
ದೊಡ್ಡಪ್ಪ ಎಸ್‌.ಅಪ್ಪ
ಮಾ. 7 ಮತ್ತು 8ರಂದು ನಡೆಯುವ ಉಚ್ಚಾಯ ಹಾಗೂ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು
ದೊಡ್ಡಪ್ಪ ಅಪ್ಪ ಶರಣಬಸವೇಶ್ವರ ಸಂಸ್ಥಾನ 9ನೇ ಪಿಠಾಧಿಪತಿ
- ವಿವಿಧ ಪ್ರಶಸ್ತಿಗಳ ಪ್ರದಾನ
‘ರಥೋತ್ಸವ ಭಾಗವಾಗಿ ನೀಡುವ ‘ಅಪ್ಪ’ ಪ್ರಶಸ್ತಿಯನ್ನು ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಪಿಠಾಧಿಪತಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರಿಗೆ ವಾರ್ಷಿಕವಾಗಿ ನೀಡುವ ‘ದಾಸೋಹ ಜ್ಞಾನ ರತ್ನ’ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆಗೆ ಅವರಿಗೆ ನೀಡಲಾಗುತ್ತಿದೆ. ಅಲ್ಲದೆ ಗೀತಾ ಖಂಡ್ರೆ ಅವರಿಗೆ ಈ ಬಾರಿ ‘ಅವ್ವ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ತಿಳಿಸಿದರು. ‘ಇದೇ ಸಂಧರ್ಭದಲ್ಲಿ 10 ವೈದ್ಯ ದಂಪತಿಗಳಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ‘ದಾಸೋಹ ಮತ್ತು ಮಾನವೀಯತೆ’ ಪುಸ್ತಕ ಬಿಡುಗಡೆ ಸಹ ನಡೆಯಲಿದೆ’ ಎಂದರು.
ದಾಸೋಹದ ಅಡುಗೆ ಮನೆಗೆ ಆಧುನಿಕ ಸ್ಪರ್ಶ
‘ಈ ಮೊದಲು ಸೌದೆ ಒಲೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲಾಗುತ್ತಿತ್ತು. ಆದರೆ ಇದಕ್ಕೆ ಆಧುನಿಕ ಸ್ಪರ್ಶ ನೀಡಿ ಒಲೆಯ ಜಾಗಕ್ಕೆ 13 ಸ್ಟೀಮ್‌ ಬಾಯ್ಲರ್ ಅಳವಡಿಸಲಾಗಿದೆ. ಇದರಿಂದ ಏಕ ಕಾಲದಲ್ಲಿ 10 ಸಾವಿರ ಜನಕ್ಕೆ ಅಡುಗೆಯನ್ನು ತಯಾರಿಸಬಹುದು’ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಅನಿಲಕುಮಾರ ಬಿಡವೆ ತಿಳಿಸಿದರು. ‘ಅಡುಗೆ ಮನೆಯನ್ನು ಸಂಪೂರ್ಣವಾಗಿ ನವಿಕರಿಸಲಾಗಿದ್ದು ಎಲ್ಲಿಯೂ ನೀರು ನಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಗೊಡೆಗಳಿಗೆ ಟೈಲ್ಸ್‌ ಅಳವಡಿಸಲಾಗಿದೆ. ಸ್ಟೀಮ್‌ ಬಾಯ್ಲರ್‌ಗಳಿಗಾಗಿ 85 ಕಿಲೊ ವ್ಯಾಟ್‌ಗಳ ಸಾಮರ್ಥ್ಯದ ಎರಡು ಯಂತ್ರಗಳನ್ನು ಖರಿದಿಸಲಾಗಿದೆ. ಕೆಲವು ಭಕ್ತರು ಸಂಪ್ರದಾಯದಂತೆ ಒಲೆಗಳಲ್ಲಿ ಅಡುಗೆ ಮಾಡಿಕೊಳ್ಳಲು ಇಚ್ಚಿಸಿದರೆ ಅದಕ್ಕೂ ಸಹ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT