‘ಪ್ಯಾರಿಸ್ ಪ್ಲಾಸ್ಟರ್ ಅಥವಾ ಪ್ಲಾಸ್ಟಿಕ್ ಗಣಪನ ಮೂರ್ತಿಗಳಿಂದ ಮಣ್ಣು, ಗಾಳಿ ಹಾಗೂ ಜಲ ಮಾಲಿನ್ಯ ತೀವ್ರವಾಗುತ್ತಿದೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ಮಣ್ಣಿನ ಮೂರ್ತಿಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಈ ಮೂರ್ತಿಗಳು ತುಟ್ಟಿ ಎಂದು ಬಹಳಷ್ಟು ಜನ ಭಾವಿಸಿದ್ದಾರೆ. ಆದರೆ, ಕೇವಲ ₹ 40ಕ್ಕೂ ನಾವು ಮೂರ್ತಿ ನೀಡುತ್ತಿದ್ದೇವೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.