<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಭೂಮಿಯಿಂದ ಸದ್ದು ಬಂದಿದೆ. ಆದರೆ ಭೂಕಂಪನ ಮಾಪನ ಕೇಂದ್ರಗಳಲ್ಲಿ ಇದು ದೃಢಪಟ್ಟಿಲ್ಲ ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಬುಧವಾರ ತಡರಾತ್ರಿ ಚಿಮ್ಮಾಈದಲಾಯಿ, ದಸ್ತಾಪುರ, ಐಪಿ ಹೊಸಳ್ಳಿ, ನೀಮಾ ಹೊಸಳ್ಳಿ, ಅಣವಾರ, ಗೌಡನಹಳ್ಳಿ, ಸುಲೇಪೇಟ ಮೊದಲಾದ ಕಡೆ ಭೂಮಿಯಿಂದ ಸದ್ದು ಬಂದಿದೆ ಎಂದು ಜನ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಭೂವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಭೂಕಂಪ ತಜ್ಞರನ್ನು ಸಂಪರ್ಕಿಸಿದ್ದೇವೆ, ಭೂಕಂಪದ ಯಾವುದೇ ದತ್ತಾಂಶ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ ಎಂದರು.</p>.<p>ಶರಣಸಿರಸಗಿಯ ಭೂಕಂಪನ ಮಾಪನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಅವರು ದತ್ತಾಂಶ ಪರಿಶೀಲಿಸಿದ್ದು ಯಾವುದೇ ಭೂಕಂಪನ ಅಥವಾ ಲಘುಕಂಪನ ದಾಖಲಾಗಿಲ್ಲ ಎಂದರು.</p>.<p>‘ಜನರು ವಿನಾಕಾರಣ ಗಾಬರಿಗೊಳ್ಳಬಾರದು. ಸರ್ಕಾರ, ವಿಜ್ಞಾನಿಗಳು ನಿಮ್ಮ ಜತೆಗಿದ್ದಾರೆ’ ಎಂದು ಅಭಯ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ವಿವಿಧೆಡೆ ಬುಧವಾರ ತಡರಾತ್ರಿ ಭೂಮಿಯಿಂದ ಸದ್ದು ಬಂದಿದೆ. ಆದರೆ ಭೂಕಂಪನ ಮಾಪನ ಕೇಂದ್ರಗಳಲ್ಲಿ ಇದು ದೃಢಪಟ್ಟಿಲ್ಲ ಎಂದು ತಹಶೀಲ್ದಾರ್ ಅಂಜುಮ್ ತಬಸ್ಸುಮ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಬುಧವಾರ ತಡರಾತ್ರಿ ಚಿಮ್ಮಾಈದಲಾಯಿ, ದಸ್ತಾಪುರ, ಐಪಿ ಹೊಸಳ್ಳಿ, ನೀಮಾ ಹೊಸಳ್ಳಿ, ಅಣವಾರ, ಗೌಡನಹಳ್ಳಿ, ಸುಲೇಪೇಟ ಮೊದಲಾದ ಕಡೆ ಭೂಮಿಯಿಂದ ಸದ್ದು ಬಂದಿದೆ ಎಂದು ಜನ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿರುವ ರಾಷ್ಟ್ರೀಯ ಭೂವೈಜ್ಞಾನಿಕ ಸಂಶೋಧನಾ ಸಂಸ್ಥೆಯ ಭೂಕಂಪ ತಜ್ಞರನ್ನು ಸಂಪರ್ಕಿಸಿದ್ದೇವೆ, ಭೂಕಂಪದ ಯಾವುದೇ ದತ್ತಾಂಶ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ ಎಂದರು.</p>.<p>ಶರಣಸಿರಸಗಿಯ ಭೂಕಂಪನ ಮಾಪನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ ಮೇಲೆ ಅವರು ದತ್ತಾಂಶ ಪರಿಶೀಲಿಸಿದ್ದು ಯಾವುದೇ ಭೂಕಂಪನ ಅಥವಾ ಲಘುಕಂಪನ ದಾಖಲಾಗಿಲ್ಲ ಎಂದರು.</p>.<p>‘ಜನರು ವಿನಾಕಾರಣ ಗಾಬರಿಗೊಳ್ಳಬಾರದು. ಸರ್ಕಾರ, ವಿಜ್ಞಾನಿಗಳು ನಿಮ್ಮ ಜತೆಗಿದ್ದಾರೆ’ ಎಂದು ಅಭಯ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>