2019–20ನೇ ಸಾಲಿನಲ್ಲಿ ಎಲ್ಕೆಜಿ ತರಗತಿಗಳಿಗೆ ಶಿಕ್ಷಕಿಯರು, ಆಯಾಗಳು ಆಯ್ಕೆಯಾಗಿದ್ದು, ಸರ್ಕಾರದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದೇವೆ. ಪ್ರಸ್ತುತ ಸಾಲಿನಲ್ಲಿ ಯುಕೆಜಿ ಶಿಕ್ಷಕಿಯರಾಗಿ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ 2020–21ನೇ ಸಾಲಿನ ವೇತನ ಅನುದಾನವೂ ಬಿಡುಗಡೆಯಾಗಿದೆ. ಶಾಲೆಯ ಆರಂಭದ ನಂತರ ಗೌರವ ಧನ ನೀಡುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇಲ್ಲಿಯವರೆಗೂ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ಏಳು ತಿಂಗಳಿಂದ ಗೌರವ ಧನ ನೀಡುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈಗಾಗಲೇ ಗೌರವ ಧನವು ಕೆಪಿಎಸ್ ಶಾಲಾ ಖಾತೆಗೆ ಬಂದು ತಲುಪಿದ್ದು, ಆದರೆ, ಗೌರವ ಧನ ವಿತರಿಸುವ ಆದೇಶ ನೀಡಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಿ ಗೌರವ ಧನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.