ಕಲಬುರ್ಗಿ: ಗುರುವಾರದಿಂದ ಸೋಮವಾರ ಬೆಳಗಿನವರೆಗೆ ನಗರದಲ್ಲಿ ಕಠಿಣ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಂದೋಬಸ್ತ್ ಪರಿಶೀಲಿಸಲು ಡಿಸಿಪಿ ಡಿ. ಕಿಶೋರಬಾಬು ನಗರ ಪ್ರದಕ್ಷಿಣೆ ಹಾಕಿದರು.
ನಗರದ ಎಸ್ ವಿ ಪಿ ವೃತ್ತ, ಜಗತ್ ಸರ್ಕಲ್, ಚೌಕ್, ಗಂಜ್, ಮುಸ್ಲಿಂ ಚೌಕ್ ಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಶೋರಬಾಬು, ಆಸ್ಪತ್ರೆಗೆ ದಾಖಲಾದವರೊಂದಿಗೆ ಬಂದಿರುವವರು ತುರ್ತು ಅಗತ್ಯಗಳಿಗೆ ರಸ್ತೆಗಿಳಿಯುತ್ತಾರೆ. ಅವರ ಸಂಚಾರಕ್ಕೆ ಅವಕಾಶ ನೀಡಲಾಗಿದೆ' ಎಂದರು.
ಎಸಿಪಿಗಳಾದ ಅಂಶುಕುಮಾರ್, ಗಿರೀಶ ಎಸ್.ಬಿ, ಜೆ.ಎಚ್.ಇನಾಮದಾರ, ಪೊಲೀಸ್ ಇನ್ ಸ್ಪೆಕ್ಟರ್ ಗಳಾದ ಕಪಿಲದೇವ, ಸಿದ್ದರಾಮೇಶ ಗಡೇದ, ವಾಜಿದ್ ಪಟೇಲ್, ಎಸ್.ಆರ್. ನಾಯಕ್, ಭಾಸು ಚವ್ಹಾಣ, ಶಿವಾನಂದ ಗಾಣಿಗೇರ, ಪಂಡಿತ ಸಗರ ಇದ್ದರು.