ಮೂರು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆ ಕ್ಷೇತ್ರದಿಂದ ಮಂಜುಳಾ ನಾಮದೇವ ರಾಠೋಡ ಅವಿರೋಧ ಆಯ್ಕೆಯಾಗಿದ್ದಾರೆ. ಭಾವಸಿಂಗ್ ಗಂಗಾರಾಮ ಜಾಧವ ಮತ್ತು ವೆಂಕಟರಾವ್ ಚಂದ್ರು ಜಾಧವ ಇಬ್ಬರೂ ಪರಿಶಿಷ್ಟ ಜಾತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಸಾಮಾನ್ಯ ಕ್ಷೇತ್ರಕ್ಕೆ ಇಲ್ಲಿ ನಾಮಪತ್ರ ಬಾರದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಗಿದೆ. ಗೆದ್ದವರು ಮೀಸಲಾತಿಯಿಂದ ಸದಸ್ಯರಾದರೆ, ಸೋತವರಿಗೆ ಸಾಮಾನ್ಯ ಕ್ಷೇತ್ರದ ಸ್ಥಾನ ಪಕ್ಕಾ ಆಗಲಿದೆ!