ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣದ ಅಧಿಕಾರಿಗಳು ಚಹಾ, ಉಪಾಹಾರದ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಚಹಾ ತರಿಸಿರಲಿಲ್ಲ. ಅಲ್ಲದೇ, ಸಚಿವರು ಸೇವಿಸುವ ಚಹಾ, ಉಪಾಹಾರವನ್ನು ಮುಂಚೆಯೇ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮಾಡಬೇಕಿತ್ತು. ಅವರಿಗೂ ವಿಮಾನದ ನಿಲ್ದಾಣದ ಹೊಣೆ ಹೊತ್ತ ಕರ್ನಾಟಕ ಕೈಗಾರಿಕೆ ಭದ್ರತಾ ಕಡೆಯ ಪೊಲೀಸ್ ಇನ್ ಸ್ಪೆಕ್ಟರ್ ನೂರ್ ಮರಡಿ ನಿಲ್ದಾಣದ ಒಳಗೆ ಅವಕಾಶ ನೀಡಿರಲಿಲ್ಲ.