ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದೃಶ್ಯಕಲೆಯೇ ಅಕ್ಷರದ ತಾಯಿ: ಡಾ.ಎಂ.ಎಸ್‌.ಮೂರ್ತಿ

Published : 14 ಜುಲೈ 2024, 6:15 IST
Last Updated : 14 ಜುಲೈ 2024, 6:15 IST
ಫಾಲೋ ಮಾಡಿ
Comments
ಶಾಸಕರು ತೆರಳಿದ್ದಕ್ಕೆ ಬೇಸರ
ಸಮಾರಂಭದ ಮಧ್ಯದಲ್ಲಿಯೇ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅನ್ಯ ಕಾರ್ಯದ ನಿಮಿತ್ತ ತೆರಳಿದರು. ಇದರಿಂದ ಬೇಸರಗೊಂಡ ಡಾ. ಎಂ.ಎಸ್‌.ಮೂರ್ತಿ ‘ಜನಪ್ರತಿನಿಧಿಗಳು ಕಲಾವಿದರೊಂದಿಗೆ ಹತ್ತು ನಿಮಿಷ ಕಳೆಯದಿರುವುದು ದುರಂತ’ ಎಂದು ತಮ್ಮ ಭಾಷಣದ ಮಧ್ಯೆಯೇ ಬೇಸರಿಸಿದರು.
‘ಕಲಾವಿದರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ’
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ಪುತ್ರಿ ತೆಲಂಗಾಣ ವಿಧಾನ ಪರಿಷತ್‌ ಸದಸ್ಯೆ ಸುರಭಿ ವಾಣಿದೇವಿ ಮಾತನಾಡಿ ‘ಕಲಾವಿದರು ಸೃಷ್ಟಿಕರ್ತರು. ಆದರೆ ಅವರು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಪ್ರೊ.ಅಂದಾನಿಯವರು ನನಗೆ 35 ವರ್ಷಗಳಿಂದ ಪರಿಚಿತರು. ಅವರ ಸಂಸ್ಥೆಯಲ್ಲಿಯೇ ನನ್ನ ಪುತ್ರಿ ಸ್ನಾತಕೋತ್ತರ ಪದವಿ ಪೂರೈಸಿದ್ದಾಳೆ. ಅವರ ಶಿಷ್ಯಂದಿರು ದೇಶದಾದ್ಯಂತ ಪಸರಿಸಿದ್ದಾರೆ. ರಮಣರೆಡ್ಡಿ ಎಂಬ ಅವರ ಶಿಷ್ಯ ಪ್ರಸ್ತುತ ಹೈದರಾಬಾದ್‌ ಕಲಾ ಸಮಾಜದ ಅಧ್ಯಕ್ಷರಾಗಿದ್ದಾರೆ. ಪ್ರೊ.ಅಂದಾನಿಯವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೂ ಕಲಾ ಕಾಲೇಜು ನಡೆಸುತ್ತಿದ್ದು ಅದಕ್ಕೆ ಅವರು ಮಾರ್ಗದರ್ಶನ ನೀಡಿದ್ದರು’ ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT