<p><strong>ಸೇಡಂ (ಕಲಬುರ್ಗಿ ಜಿಲ್ಲೆ):</strong> ತಾಲ್ಲೂಕಿನ ಸಂಗಾವಿ (ಎಂ) ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಬಟ್ಟೆಯ ತೊಳೆಯಲು ಹೋದ ಮಹಿಳೆ ಶುಕ್ರವಾರ ನೀರಿನಲ್ಲಿ ಕೊಚ್ಚಿಕೊಂಡ ಹೋಗಿದ್ದಾಳೆ.</p>.<p>ಗ್ರಾಮದ ಮಾಣಿಕಮ್ಮ ಗಂಡ ಸಂಗಪ್ಪ (28) ಎನ್ನುವ ಮಹಿಳೆಯೇ ನೀರು ಪಾಲಾಗಿದ್ದಾಳೆ. ಬಟ್ಟೆ ತೊಳೆಯಲು ಕಾಗಿಣಾ ನದಿಗೆ ತೆರಳಿದ್ದ ಸಂದರ್ಭದಲ್ಲಿ ಬಟ್ಟೆಯನ್ನು ತುಂಬಿದ್ದ ಬುಟ್ಟಿ ನೀರಿಗೆ ಉರುಳಿದೆ. ಅದನ್ನು ತೆಗೆದುಕೊಳ್ಳಲು ಮುಂದಾದಾಗ ನದಿ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.</p>.<p>ಗ್ರಾಮದ ಕವಿತಾ ಎನ್ನುವರು ನದಿಯತ್ತ ತೆರಳಿದಾಗ ವಿಷಯ ಗಮನಕ್ಕೆ ಬಂದಿದೆ. ಸುದ್ದಿ ತಿಳಿದು ಗ್ರಾಮಸ್ಥರು ನದಿಯತ್ತ ದೌಡಾಯಿಸಿ ಅಗ್ನಿಶಾಮಕ ಠಾಣೆ ಸೇರಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ದಿನ ಪೂರ್ತಿ ದೋಣಿ ಮೂಲಕ ಕಾಗಿಣಾ ನದಿಯ ದಂಡೆಗಳಲ್ಲಿ ಹಾಗೂ ಮುಳ್ಳುಕಂಟಿಗಳಲ್ಲಿ ಹುಡುಕಿದ್ದಾರೆ. ಜೊತೆಗೆ ಮಳಖೇಡ ಸೇತುವೆವರೆಗೆ ತೆರಳಿ ಕಾರ್ಯಾಚರಣೆ ನಡೆಸಿದರೂ ಮಹಿಳೆ ದೇಹ ಸಿಗಲಿಲ್ಲ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.</p>.<p>ಮಾಣಿಕಮ್ಮ ಅವರಿಗೆ ಗಂಡ, ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಕೊಡದೂರ ಗ್ರಾಮದ ಮಹಿಳೆಯಾಗಿದ್ದು ಸಂಗಾವಿ (ಎಂ) ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.</p>.<p>ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಮಳಖೇಡ ಠಾಣೆಯ ಪಿಎಸ್ಐ ಪೃಥ್ವಿರಾಜ ತಿವಾರಿ, ಎಎಸ್ಐ ಶಿವಶರಣಪ್ಪ, ಹುಲಿಗೆಪ್ಪ ಭೇಟಿ ನೀಡಿದರು.</p>.<p>ಮಾಣಿಕಮ್ಮ ಅವರ ಮಾವ 'ಬಟ್ಟೆ ತೊಳೆಯಲು ನೀರಿಗೆ ಹೋಗಬೇಡ. ಮನೆಯಲ್ಲಿಯೇ ನೀರು ತುಂಬಿಟ್ಟಿದ್ದೇನೆ. ಅವುಗಳಲ್ಲಿಯೇ ಬಟ್ಟೆ ತೊಳೆ, ನದಿಯಲ್ಲಿ ನೀರು ಬಹಳ ಇದೆ' ಎಂದು ಹೇಳಿದ್ದರು. ಆದರೂ ಮಹಿಳೆ ನದಿಗೆ ಹೋಗಿದ್ದಳು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ (ಕಲಬುರ್ಗಿ ಜಿಲ್ಲೆ):</strong> ತಾಲ್ಲೂಕಿನ ಸಂಗಾವಿ (ಎಂ) ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಬಟ್ಟೆಯ ತೊಳೆಯಲು ಹೋದ ಮಹಿಳೆ ಶುಕ್ರವಾರ ನೀರಿನಲ್ಲಿ ಕೊಚ್ಚಿಕೊಂಡ ಹೋಗಿದ್ದಾಳೆ.</p>.<p>ಗ್ರಾಮದ ಮಾಣಿಕಮ್ಮ ಗಂಡ ಸಂಗಪ್ಪ (28) ಎನ್ನುವ ಮಹಿಳೆಯೇ ನೀರು ಪಾಲಾಗಿದ್ದಾಳೆ. ಬಟ್ಟೆ ತೊಳೆಯಲು ಕಾಗಿಣಾ ನದಿಗೆ ತೆರಳಿದ್ದ ಸಂದರ್ಭದಲ್ಲಿ ಬಟ್ಟೆಯನ್ನು ತುಂಬಿದ್ದ ಬುಟ್ಟಿ ನೀರಿಗೆ ಉರುಳಿದೆ. ಅದನ್ನು ತೆಗೆದುಕೊಳ್ಳಲು ಮುಂದಾದಾಗ ನದಿ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.</p>.<p>ಗ್ರಾಮದ ಕವಿತಾ ಎನ್ನುವರು ನದಿಯತ್ತ ತೆರಳಿದಾಗ ವಿಷಯ ಗಮನಕ್ಕೆ ಬಂದಿದೆ. ಸುದ್ದಿ ತಿಳಿದು ಗ್ರಾಮಸ್ಥರು ನದಿಯತ್ತ ದೌಡಾಯಿಸಿ ಅಗ್ನಿಶಾಮಕ ಠಾಣೆ ಸೇರಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<p>ದಿನ ಪೂರ್ತಿ ದೋಣಿ ಮೂಲಕ ಕಾಗಿಣಾ ನದಿಯ ದಂಡೆಗಳಲ್ಲಿ ಹಾಗೂ ಮುಳ್ಳುಕಂಟಿಗಳಲ್ಲಿ ಹುಡುಕಿದ್ದಾರೆ. ಜೊತೆಗೆ ಮಳಖೇಡ ಸೇತುವೆವರೆಗೆ ತೆರಳಿ ಕಾರ್ಯಾಚರಣೆ ನಡೆಸಿದರೂ ಮಹಿಳೆ ದೇಹ ಸಿಗಲಿಲ್ಲ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.</p>.<p>ಮಾಣಿಕಮ್ಮ ಅವರಿಗೆ ಗಂಡ, ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಕೊಡದೂರ ಗ್ರಾಮದ ಮಹಿಳೆಯಾಗಿದ್ದು ಸಂಗಾವಿ (ಎಂ) ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.</p>.<p>ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಮಳಖೇಡ ಠಾಣೆಯ ಪಿಎಸ್ಐ ಪೃಥ್ವಿರಾಜ ತಿವಾರಿ, ಎಎಸ್ಐ ಶಿವಶರಣಪ್ಪ, ಹುಲಿಗೆಪ್ಪ ಭೇಟಿ ನೀಡಿದರು.</p>.<p>ಮಾಣಿಕಮ್ಮ ಅವರ ಮಾವ 'ಬಟ್ಟೆ ತೊಳೆಯಲು ನೀರಿಗೆ ಹೋಗಬೇಡ. ಮನೆಯಲ್ಲಿಯೇ ನೀರು ತುಂಬಿಟ್ಟಿದ್ದೇನೆ. ಅವುಗಳಲ್ಲಿಯೇ ಬಟ್ಟೆ ತೊಳೆ, ನದಿಯಲ್ಲಿ ನೀರು ಬಹಳ ಇದೆ' ಎಂದು ಹೇಳಿದ್ದರು. ಆದರೂ ಮಹಿಳೆ ನದಿಗೆ ಹೋಗಿದ್ದಳು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>