<p><strong>ಚಿಂಚೋಳಿ</strong>: ತಾಲ್ಲೂಕಿನ ಕರ್ಚಖೇಡದಲ್ಲಿ ಬಟ್ಟೆತೊಳೆಯಲು ಮುಲ್ಲಾಮಾರಿ ನದಿಗೆ ತೆರಳಿದ್ದ ಮಹಿಳೆ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. </p>.<p>ಬುಜ್ಜಮ್ಮ ಝರಣಪ್ಪ (35) ನೀರಿನಲ್ಲಿ ಕೊಚ್ಚಿಕೊಂಡು ಹೋದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಘಟನಾ ಸ್ಥಳಕ್ಕೆ ಸುಲೇಪೇಟ ಠಾಣೆಯ ಪಿಎಸ್ಐ ಅಮರ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಭೇಟಿ ನೀಡಿ ಮಾಹಿತಿ ಪಡೆದ್ದಾರೆ.</p>.<p>ಚಿಮ್ಮನಚೋಡ ಸುತ್ತಲೂ ಮಂಗಳವಾರ 7 ಸೆಂ.ಮೀ. ಮಳೆ ಸುರಿದಿದ್ದರಿಂದ ನಾಗರಾಳ ಜಲಾಶಯದಿಂದ ಸುಮಾರು 800 ಕ್ಯುಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಪ್ರವಾಹ ಬಂದಿದೆ. ನೀರಿನ ರಭಸ ಹೆಚ್ಚಿರುವುದರಿಂದ ಕಾಲು ಜಾರಿ ಬಿದ್ದ ಮಹಿಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p><strong>ಮೂರಕ್ಕೇರಿದ ಸಾವಿನ ಸಂಖ್ಯೆ:</strong> ಪ್ರಸಕ್ತ ವರ್ಷ ಪ್ರವಾಹದಲ್ಲಿ ಸಿಲುಕಿ ತಾಲ್ಲೂಕಿನ ಪೊತಂಗಲ ಬಳಿ ಕಾಗಿಣಾ ನದಿಯಲ್ಲಿ ಸೇಡಂ ತಾಲ್ಲೂಕಿನ ಯಡಗಾದ ನಿವಾಸಿಯೊಬ್ಬರು ನದಿ ದಾಟುವಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಚಿಮ್ಮನಚೋಡದಲ್ಲಿ ವ್ಯಕ್ತಿಯೊಬ್ಬರು ನದಿಯ ಪ್ರವಾಹದ ಹಿನ್ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದರೆ, ಬುಧವಾರ ಕರ್ಚಖೇಡದಲ್ಲಿ ಗೃಹಿಣಿ ನೀರು ಪಾಲಾಗಿದ್ದಾರೆ. ಒಂದು ವಾರದ ಹಿಂದೆ ಇರಗಪಳ್ಳಿಯ ಜೋಡೆತ್ತುಗಳು ಹಾಗೂ ಬಂಡಿ ನೀರು ಪಾಲಾಗಿದ್ದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ತಾಲ್ಲೂಕಿನ ಕರ್ಚಖೇಡದಲ್ಲಿ ಬಟ್ಟೆತೊಳೆಯಲು ಮುಲ್ಲಾಮಾರಿ ನದಿಗೆ ತೆರಳಿದ್ದ ಮಹಿಳೆ ಕಾಲು ಜಾರಿ ಬಿದ್ದು ನೀರು ಪಾಲಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. </p>.<p>ಬುಜ್ಜಮ್ಮ ಝರಣಪ್ಪ (35) ನೀರಿನಲ್ಲಿ ಕೊಚ್ಚಿಕೊಂಡು ಹೋದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. </p>.<p>ಘಟನಾ ಸ್ಥಳಕ್ಕೆ ಸುಲೇಪೇಟ ಠಾಣೆಯ ಪಿಎಸ್ಐ ಅಮರ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ ಭೇಟಿ ನೀಡಿ ಮಾಹಿತಿ ಪಡೆದ್ದಾರೆ.</p>.<p>ಚಿಮ್ಮನಚೋಡ ಸುತ್ತಲೂ ಮಂಗಳವಾರ 7 ಸೆಂ.ಮೀ. ಮಳೆ ಸುರಿದಿದ್ದರಿಂದ ನಾಗರಾಳ ಜಲಾಶಯದಿಂದ ಸುಮಾರು 800 ಕ್ಯುಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಪ್ರವಾಹ ಬಂದಿದೆ. ನೀರಿನ ರಭಸ ಹೆಚ್ಚಿರುವುದರಿಂದ ಕಾಲು ಜಾರಿ ಬಿದ್ದ ಮಹಿಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<p><strong>ಮೂರಕ್ಕೇರಿದ ಸಾವಿನ ಸಂಖ್ಯೆ:</strong> ಪ್ರಸಕ್ತ ವರ್ಷ ಪ್ರವಾಹದಲ್ಲಿ ಸಿಲುಕಿ ತಾಲ್ಲೂಕಿನ ಪೊತಂಗಲ ಬಳಿ ಕಾಗಿಣಾ ನದಿಯಲ್ಲಿ ಸೇಡಂ ತಾಲ್ಲೂಕಿನ ಯಡಗಾದ ನಿವಾಸಿಯೊಬ್ಬರು ನದಿ ದಾಟುವಾಗ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಚಿಮ್ಮನಚೋಡದಲ್ಲಿ ವ್ಯಕ್ತಿಯೊಬ್ಬರು ನದಿಯ ಪ್ರವಾಹದ ಹಿನ್ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದರೆ, ಬುಧವಾರ ಕರ್ಚಖೇಡದಲ್ಲಿ ಗೃಹಿಣಿ ನೀರು ಪಾಲಾಗಿದ್ದಾರೆ. ಒಂದು ವಾರದ ಹಿಂದೆ ಇರಗಪಳ್ಳಿಯ ಜೋಡೆತ್ತುಗಳು ಹಾಗೂ ಬಂಡಿ ನೀರು ಪಾಲಾಗಿದ್ದವು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>