<p><strong>ಕಾಳಗಿ:</strong> ನಾಯಿಗಳಿಂದ ಸುತ್ತುವರಿದಿದ್ದ ಹಸು ಮತ್ತು ಕರುವನ್ನು ಸ್ಥಳೀಯರು ರಕ್ಷಿಸಿದ್ದಾರೆ.</p>.<p>ತಾಲ್ಲೂಕಿ ಕೊಡದೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿ ಚೆಟ್ಟಿ ಅವರ ಮನೆ ಪಕ್ಕದಲ್ಲಿ ಹಸು ಕರು ಹಾಕಿತ್ತು. ಬಿಸಿಲಲ್ಲೇ ನಿಂತಿದ್ದ ಹಸುವನ್ನು ನಾಯಿಗಳು ಸುತ್ತುವರಿದ್ದವು. ಇದನ್ನು ಗಮನಿಸಿದ ರವಿ ಚೆಟ್ಟಿ ಪ್ರಜಾವಾಣಿ ಪ್ರತಿನಿಧಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಆಕಳು-ಎಳೆ ಕರುವನ್ನು ರಕ್ಷಣೆ ಮಾಡಲಾಯಿತು. </p>.<p>ವಿಷಯ ತಿಳಿದ ಸರ್ಕಾರಿ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಗೌತಮ ಕಾಂಬಳೆ, ಆಂಬುಲೆನ್ಸ್ ವೈದ್ಯಾಧಿಕಾರಿ ಡಾ.ಅಭಿಷೇಕ ಪಾಟೀಲ, ಮೈತ್ರಿ ವರ್ಕರ್ ನಾಗರೆಡ್ಡಿ ಬೀರನಳ್ಳಿ, ಸಹಾಯಕ ಸಚಿನ ದಂಡಗುಲಕರ್ ಸ್ಥಳಕ್ಕೆ ಆಗಮಿಸಿದರು.</p>.<p>ಬಳಿಕ ಆಕಳು, ಎಳೆಕರುವನ್ನು ಆಸ್ಪತ್ರೆಗೆ ಕರೆ ತಂದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ನೀರು, ಮೇವು ಹಾಕಿ ಆಶ್ರಯ ಕಲ್ಪಿಸಿದರು. ಸಾಮಾಜಿಕ ಜಾಲತಣಗಳ ಮೂಲಕ ಈ ಸುದ್ದಿ ಎಲ್ಲೆಡೆ ಹರಿದಾಡಿದರೂ ಸಂಬಂಧಪಟ್ಟ ಯಾರೊಬ್ಬರು ಸಮೀಪಕ್ಕೆ ಬರಲಿಲ್ಲ. ಈ ನಡುವೆ ಕರುವನ್ನು ಅಲ್ಲೇ ಬಿಟ್ಟು ಆಕಳು ಬೇರೆಡೆ ಓಡಿಹೋಗಿದ್ದರಿಂದ ಹುಡುಕಾಡಲು ವೈದ್ಯರಿಗೆ ಬಿಸಿಲಿನ ಕಾವು ತಟ್ಟಿಸಿತು.</p>.<p>ಬಳಿಕ ಇತರರ ಸಹಾಯದೊಂದಿಗೆ ಹಗ್ಗ ಕಟ್ಟಿ ಹಿಡಿದುತಂದರೂ ಪಶು ಆಸ್ಪತ್ರೆಗೆ ಬಾರದ ಆಕಳನ್ನು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೂಡಿಹಾಕಿ ಕರುವನ್ನು ಅಲ್ಲೇ ತಂದು ಹಾಲು ಕುಡಿಸಲಾಯಿತು.</p>.<p>ಸಂಜೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಬಿಲ್ ಕಲೆಕ್ಟರ್ ದತ್ತಾತ್ರೇಯ ಕಲಾಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಅವರಿವರನ್ನು ಕರೆತಂದು ಪತ್ತೆ ಹಚ್ಚಿದರು.</p>.<p>ಚಿಕ್ಕಂಡಿ ತಾಂಡಾದ ವಿಶ್ವನಾಥ ಜೈಸಿಂಗ್ ಜಾಧವ ಎಂಬುವವರು ‘ಹಸು ನಮಗೆ ಸೇರಿದ್ದು’ ಎಂದು ತಿಳಿಸಿ ಆಕಳು-ಕರುವನ್ನು ಕರೆದುಕೊಂಡು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ನಾಯಿಗಳಿಂದ ಸುತ್ತುವರಿದಿದ್ದ ಹಸು ಮತ್ತು ಕರುವನ್ನು ಸ್ಥಳೀಯರು ರಕ್ಷಿಸಿದ್ದಾರೆ.</p>.<p>ತಾಲ್ಲೂಕಿ ಕೊಡದೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿ ಚೆಟ್ಟಿ ಅವರ ಮನೆ ಪಕ್ಕದಲ್ಲಿ ಹಸು ಕರು ಹಾಕಿತ್ತು. ಬಿಸಿಲಲ್ಲೇ ನಿಂತಿದ್ದ ಹಸುವನ್ನು ನಾಯಿಗಳು ಸುತ್ತುವರಿದ್ದವು. ಇದನ್ನು ಗಮನಿಸಿದ ರವಿ ಚೆಟ್ಟಿ ಪ್ರಜಾವಾಣಿ ಪ್ರತಿನಿಧಿಗೆ ಸುದ್ದಿ ಮುಟ್ಟಿಸಿದರು. ಬಳಿಕ ಆಕಳು-ಎಳೆ ಕರುವನ್ನು ರಕ್ಷಣೆ ಮಾಡಲಾಯಿತು. </p>.<p>ವಿಷಯ ತಿಳಿದ ಸರ್ಕಾರಿ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಗೌತಮ ಕಾಂಬಳೆ, ಆಂಬುಲೆನ್ಸ್ ವೈದ್ಯಾಧಿಕಾರಿ ಡಾ.ಅಭಿಷೇಕ ಪಾಟೀಲ, ಮೈತ್ರಿ ವರ್ಕರ್ ನಾಗರೆಡ್ಡಿ ಬೀರನಳ್ಳಿ, ಸಹಾಯಕ ಸಚಿನ ದಂಡಗುಲಕರ್ ಸ್ಥಳಕ್ಕೆ ಆಗಮಿಸಿದರು.</p>.<p>ಬಳಿಕ ಆಕಳು, ಎಳೆಕರುವನ್ನು ಆಸ್ಪತ್ರೆಗೆ ಕರೆ ತಂದ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ನೀರು, ಮೇವು ಹಾಕಿ ಆಶ್ರಯ ಕಲ್ಪಿಸಿದರು. ಸಾಮಾಜಿಕ ಜಾಲತಣಗಳ ಮೂಲಕ ಈ ಸುದ್ದಿ ಎಲ್ಲೆಡೆ ಹರಿದಾಡಿದರೂ ಸಂಬಂಧಪಟ್ಟ ಯಾರೊಬ್ಬರು ಸಮೀಪಕ್ಕೆ ಬರಲಿಲ್ಲ. ಈ ನಡುವೆ ಕರುವನ್ನು ಅಲ್ಲೇ ಬಿಟ್ಟು ಆಕಳು ಬೇರೆಡೆ ಓಡಿಹೋಗಿದ್ದರಿಂದ ಹುಡುಕಾಡಲು ವೈದ್ಯರಿಗೆ ಬಿಸಿಲಿನ ಕಾವು ತಟ್ಟಿಸಿತು.</p>.<p>ಬಳಿಕ ಇತರರ ಸಹಾಯದೊಂದಿಗೆ ಹಗ್ಗ ಕಟ್ಟಿ ಹಿಡಿದುತಂದರೂ ಪಶು ಆಸ್ಪತ್ರೆಗೆ ಬಾರದ ಆಕಳನ್ನು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕೂಡಿಹಾಕಿ ಕರುವನ್ನು ಅಲ್ಲೇ ತಂದು ಹಾಲು ಕುಡಿಸಲಾಯಿತು.</p>.<p>ಸಂಜೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಬಿಲ್ ಕಲೆಕ್ಟರ್ ದತ್ತಾತ್ರೇಯ ಕಲಾಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಅವರಿವರನ್ನು ಕರೆತಂದು ಪತ್ತೆ ಹಚ್ಚಿದರು.</p>.<p>ಚಿಕ್ಕಂಡಿ ತಾಂಡಾದ ವಿಶ್ವನಾಥ ಜೈಸಿಂಗ್ ಜಾಧವ ಎಂಬುವವರು ‘ಹಸು ನಮಗೆ ಸೇರಿದ್ದು’ ಎಂದು ತಿಳಿಸಿ ಆಕಳು-ಕರುವನ್ನು ಕರೆದುಕೊಂಡು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>