ನಗರದ ಟೈಲ್ಸ್ ಪಾಲಿಷಿಂಗ್ ಕೆಲಸ ಮಾಡುತ್ತಿದ್ದ ದಶರಥ ಆರೋಪಿಗಳಾದ ಸಂಜು ಗುತ್ತೇದಾರ, ರಾಹುಲ್ ಪರೀಟ, ಪವನ್ ಪರೀಟ ಹಾಗೂ ಪಾಣ್ಯಾ ಎಂಬುವವರಿಗೆ ಚಹಾದ ಬಿಲ್ ನೀಡಬೇಕಿತ್ತು. ಹಳೆಯ ವೈಷಮ್ಯವೂ ಇತ್ತು. ಇದರಿಂದಾಗಿ ಯುವಕನನ್ನು ಮಾರಕಾಸ್ತ್ರಗಳಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಾ ನಗರದಲ್ಲಿ ಕೊಂದು ಹಾಕಿದ್ದಾರೆ ಎಂದು ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್. ತಿಳಿಸಿದ್ದಾರೆ.