<p><strong>ಗುಲ್ಬರ್ಗ:</strong> ಸ್ವಾತಂತ್ರ್ಯ ನಂತರವೂ ದರ್ಶನ ನೀಡದ ಬಸ್, ಇಲ್ಲಿವರೆಗೂ ನಿರ್ಮಾಣವಾಗದ ರಸ್ತೆ, ಭೀಮಾನದಿ ದಂಡೆಯಲ್ಲಿದ್ದರೂ ತಪ್ಪದ ನೀರಿನ ಬವಣೆ, ಸದಾ ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್, ಇದೆಲ್ಲದಕ್ಕೂ ಮಿಗಿಲಾಗಿ ‘ಮೋಹಿನಿ’ ಕಾಟದಿಂದ ಬೇಸತ್ತ ಗ್ರಾಮ... ಇದು ಗುಲ್ಬರ್ಗ ತಾಲ್ಲೂಕಿನ ಸೋಮನಾಥಹಳ್ಳಿಯ ದುಸ್ಥಿತಿ!<br /> <br /> ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಿಂದ ಕೇವಲ 3.20 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಇದುವರೆಗೂ ರಸ್ತೆ, ನೀರು, ಚರಂಡಿ, ಶೌಚಾಲಯ ಮುಂತಾದ ಕನಿಷ್ಠ ಮೂಲಸೌಕರ್ಯವೂ ಇಲ್ಲ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ಇದು ಸೂರ್ಯ ಪ್ರಕಾಶದಷ್ಟೇ ಸತ್ಯ.<br /> <br /> ಗುಲ್ಬರ್ಗದಿಂದ ಸುಮಾರು 25 ಕಿ.ಮೀ. ದೂರವಿರುವ ಈ ಗ್ರಾಮದೊಳಗೆ ಪ್ರವೇಶ ಮಾಡಿದರೆ ಸಾಕು, ಈಗಾಗಲೇ ನಿಮ್ಮಂಗೆ ಕ್ಯಾಮೆರಾ, ಕಾಪಿ, ಪೆನ್ನು ಹಿಡಕೊಂಡು ಬಹಳಷ್ಟು ಜನ ಬಂದು ಹೋಗಿದ್ದಾರೆ. <br /> <br /> ಆದರೂ ನಮ್ಮೂರಿನ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಸುಮ್ನೆ ಬರಕೊಂಡು ಹೋದ್ರೆ ಏನಾಗತೈತ್ರಿ? ಅಲ್ಲೋಗಿ ನೋಡಿ ನಮ್ಮ ಗತಿ ಏನದ ಅಂಥ ನಿಮಗೆ ಗೊತ್ತಾಗುತ್ತೆ ಎಂದು ಜಗದೇವಪ್ಪ ಕೆಲ್ಲೂರ, ಶಿವರಾಯ ನಾಯ್ಕೋಡಿ, ಸಾಮ್ರಾಜ್ ನಾಯ್ಕೋಡಿ ಊರೊಳಗೆ ಬೆರಳು ಮಾಡಿ ತೋರಿಸಿದರು.<br /> <br /> ಜನರ ತೋರು ಬೆರಳಿನ ನೇರ ಒಳ ಹೋಗುತ್ತಿದ್ದಂತೆ, ಕಲ್ಲು-ಮಣ್ಣು, ಕೆಸರಿನಿಂದ ಕೂಡಿದ ಕಾಲು ದಾರಿ, ಒಣಗಿ ನಿಂತ ನೀರಿನ ಟ್ಯಾಂಕ್,  ಹಾಳು ಬಿದ್ದ ದೊಡ್ಡ ದೊಡ್ಡ ಮನೆಗಳು ಗೋಚರಿದವು. ಸುಮಾರು 150 ಮನೆಗಳಿರುವ ಈ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇವರ ದಯನೀಯ ಸ್ಥಿತಿ ನೋಡಿದರೆ ದೇವರಿಗೆ ಪ್ರೀತಿ ಎನ್ನುವಂತಿದೆ. ಗ್ರಾಮದ ಸಮಸ್ಯೆಗಳೇನು ಎಂದು ಕೇಳುವುದಷ್ಟೇ ಸಾಕು, ಅಲ್ಲಿ ಸೇರಿದ್ದ ಎಲ್ಲರೂ ‘ಇಲ್ಲ’ಗಳ ಪಟ್ಟಿಯನ್ನೇ ನೀಡಿದರು. ಅವುಗಳನ್ನು ಅವರ ಬಾಯಿಯಿಂದಲೇ ಕೇಳಿ....<br /> <br /> ಬೀದರ್-ಶ್ರೀರಂಗಪಟ್ಟಣ ಮುಖ್ಯರಸ್ತೆಯಲ್ಲಿ ಬರುವ ಹಳ್ಳಿ ಕ್ರಾಸ್ ಹತ್ತಿರ ನೀರು ಮತ್ತು ನೆರಳು ಇಲ್ಲದ್ದರಿಂದ ಹೊತ್ತೇರಿದಂತೆ ಜನರ ಸುಳಿವೇ ಇರುವುದಿಲ್ಲ ಎಂದು ಸಂಗಣ್ಣ ಉಳ್ಳಾಗಡ್ಡಿ ತಿಳಿಸಿದರು.<br /> <br /> ಟ್ಯಾಂಕಿನಿಂದ ಸಮರ್ಪಕ ಕುಡಿಯುವ ನೀರು ಬಿಡುತ್ತಿಲ್ಲವಾದ್ದರಿಂದ ಬಟ್ಟೆ ತೊಳೆಯಲು ಮತ್ತು ದಿನಬಳಕೆಯ ನೀರಿಗಾಗಿ ಇಲ್ಲಿನ ವೃದ್ಧರು, ಯುವಕರು, ಮಹಿಳೆಯರು ಹತ್ತಿರದ ಭೀಮಾನದಿಯನ್ನೇ ಆಶ್ರಯಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ತಿಳಿಸುತ್ತಾರೆ.<br /> <br /> ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಶಹಾಬಾದ ಮತಕ್ಷೇತ್ರದಲ್ಲಿ ಬರುತ್ತಿದ್ದ ಈ ಹಳ್ಳಿಗೆ ಕಾರ್ಮಿಕ ಸಚಿವರಾಗಿದ್ದ ಸಿ. ಗುರುನಾಥ ಅವರ ಕಾಲದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕ್ರಾಸ್ ಬಳಿ ಬಸ್ ನಿಲ್ದಾಣದ ಕಾಮಗಾರಿ ಸಹ ಆರಂಭಿಸಲಾಗಿತ್ತು. ಆದರೆ ಇದೀಗ ಅಲ್ಲಿ ಯಾವುದೇ ಕುರುಹುಗಳು ಕಂಡು ಬರುವುದಿಲ್ಲ. <br /> <br /> ಮೋಹಿನಿ ಕಾಟವಿಲ್ಲ ಎಂದು ಹೇಳಿ ಇಲ್ಲಿಗೆ ಪಾದ ಹಾಕಿದ ಚಿತ್ರದುರ್ಗದ ಮುರುಘಾ ಶರಣರು ಮತ್ತು ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು, ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಭಯ ನಿವಾರಿಸುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದರೂ, ಜನ ಮಾತ್ರ ಇನ್ನೂ ಭಯದ ನೆರಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. <br /> <br /> ಒಂದರ ನಂತರ ಮತ್ತೊಂದು ಸಮಸ್ಯೆ ಎನ್ನುವಂತೆ ‘ಪರೇಶಾನ್’ ಆಗಿರುವ ಗ್ರಾಮಸ್ಥರು, ಬೀದಿಗಿಳಿದು ಹೋರಾಟ ಮಾಡುವ ಮುನ್ನ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸಲು ಮುಂದಾಗಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಲ್ಬರ್ಗ:</strong> ಸ್ವಾತಂತ್ರ್ಯ ನಂತರವೂ ದರ್ಶನ ನೀಡದ ಬಸ್, ಇಲ್ಲಿವರೆಗೂ ನಿರ್ಮಾಣವಾಗದ ರಸ್ತೆ, ಭೀಮಾನದಿ ದಂಡೆಯಲ್ಲಿದ್ದರೂ ತಪ್ಪದ ನೀರಿನ ಬವಣೆ, ಸದಾ ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್, ಇದೆಲ್ಲದಕ್ಕೂ ಮಿಗಿಲಾಗಿ ‘ಮೋಹಿನಿ’ ಕಾಟದಿಂದ ಬೇಸತ್ತ ಗ್ರಾಮ... ಇದು ಗುಲ್ಬರ್ಗ ತಾಲ್ಲೂಕಿನ ಸೋಮನಾಥಹಳ್ಳಿಯ ದುಸ್ಥಿತಿ!<br /> <br /> ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಿಂದ ಕೇವಲ 3.20 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಇದುವರೆಗೂ ರಸ್ತೆ, ನೀರು, ಚರಂಡಿ, ಶೌಚಾಲಯ ಮುಂತಾದ ಕನಿಷ್ಠ ಮೂಲಸೌಕರ್ಯವೂ ಇಲ್ಲ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ಇದು ಸೂರ್ಯ ಪ್ರಕಾಶದಷ್ಟೇ ಸತ್ಯ.<br /> <br /> ಗುಲ್ಬರ್ಗದಿಂದ ಸುಮಾರು 25 ಕಿ.ಮೀ. ದೂರವಿರುವ ಈ ಗ್ರಾಮದೊಳಗೆ ಪ್ರವೇಶ ಮಾಡಿದರೆ ಸಾಕು, ಈಗಾಗಲೇ ನಿಮ್ಮಂಗೆ ಕ್ಯಾಮೆರಾ, ಕಾಪಿ, ಪೆನ್ನು ಹಿಡಕೊಂಡು ಬಹಳಷ್ಟು ಜನ ಬಂದು ಹೋಗಿದ್ದಾರೆ. <br /> <br /> ಆದರೂ ನಮ್ಮೂರಿನ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಸುಮ್ನೆ ಬರಕೊಂಡು ಹೋದ್ರೆ ಏನಾಗತೈತ್ರಿ? ಅಲ್ಲೋಗಿ ನೋಡಿ ನಮ್ಮ ಗತಿ ಏನದ ಅಂಥ ನಿಮಗೆ ಗೊತ್ತಾಗುತ್ತೆ ಎಂದು ಜಗದೇವಪ್ಪ ಕೆಲ್ಲೂರ, ಶಿವರಾಯ ನಾಯ್ಕೋಡಿ, ಸಾಮ್ರಾಜ್ ನಾಯ್ಕೋಡಿ ಊರೊಳಗೆ ಬೆರಳು ಮಾಡಿ ತೋರಿಸಿದರು.<br /> <br /> ಜನರ ತೋರು ಬೆರಳಿನ ನೇರ ಒಳ ಹೋಗುತ್ತಿದ್ದಂತೆ, ಕಲ್ಲು-ಮಣ್ಣು, ಕೆಸರಿನಿಂದ ಕೂಡಿದ ಕಾಲು ದಾರಿ, ಒಣಗಿ ನಿಂತ ನೀರಿನ ಟ್ಯಾಂಕ್,  ಹಾಳು ಬಿದ್ದ ದೊಡ್ಡ ದೊಡ್ಡ ಮನೆಗಳು ಗೋಚರಿದವು. ಸುಮಾರು 150 ಮನೆಗಳಿರುವ ಈ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇವರ ದಯನೀಯ ಸ್ಥಿತಿ ನೋಡಿದರೆ ದೇವರಿಗೆ ಪ್ರೀತಿ ಎನ್ನುವಂತಿದೆ. ಗ್ರಾಮದ ಸಮಸ್ಯೆಗಳೇನು ಎಂದು ಕೇಳುವುದಷ್ಟೇ ಸಾಕು, ಅಲ್ಲಿ ಸೇರಿದ್ದ ಎಲ್ಲರೂ ‘ಇಲ್ಲ’ಗಳ ಪಟ್ಟಿಯನ್ನೇ ನೀಡಿದರು. ಅವುಗಳನ್ನು ಅವರ ಬಾಯಿಯಿಂದಲೇ ಕೇಳಿ....<br /> <br /> ಬೀದರ್-ಶ್ರೀರಂಗಪಟ್ಟಣ ಮುಖ್ಯರಸ್ತೆಯಲ್ಲಿ ಬರುವ ಹಳ್ಳಿ ಕ್ರಾಸ್ ಹತ್ತಿರ ನೀರು ಮತ್ತು ನೆರಳು ಇಲ್ಲದ್ದರಿಂದ ಹೊತ್ತೇರಿದಂತೆ ಜನರ ಸುಳಿವೇ ಇರುವುದಿಲ್ಲ ಎಂದು ಸಂಗಣ್ಣ ಉಳ್ಳಾಗಡ್ಡಿ ತಿಳಿಸಿದರು.<br /> <br /> ಟ್ಯಾಂಕಿನಿಂದ ಸಮರ್ಪಕ ಕುಡಿಯುವ ನೀರು ಬಿಡುತ್ತಿಲ್ಲವಾದ್ದರಿಂದ ಬಟ್ಟೆ ತೊಳೆಯಲು ಮತ್ತು ದಿನಬಳಕೆಯ ನೀರಿಗಾಗಿ ಇಲ್ಲಿನ ವೃದ್ಧರು, ಯುವಕರು, ಮಹಿಳೆಯರು ಹತ್ತಿರದ ಭೀಮಾನದಿಯನ್ನೇ ಆಶ್ರಯಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ತಿಳಿಸುತ್ತಾರೆ.<br /> <br /> ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಶಹಾಬಾದ ಮತಕ್ಷೇತ್ರದಲ್ಲಿ ಬರುತ್ತಿದ್ದ ಈ ಹಳ್ಳಿಗೆ ಕಾರ್ಮಿಕ ಸಚಿವರಾಗಿದ್ದ ಸಿ. ಗುರುನಾಥ ಅವರ ಕಾಲದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕ್ರಾಸ್ ಬಳಿ ಬಸ್ ನಿಲ್ದಾಣದ ಕಾಮಗಾರಿ ಸಹ ಆರಂಭಿಸಲಾಗಿತ್ತು. ಆದರೆ ಇದೀಗ ಅಲ್ಲಿ ಯಾವುದೇ ಕುರುಹುಗಳು ಕಂಡು ಬರುವುದಿಲ್ಲ. <br /> <br /> ಮೋಹಿನಿ ಕಾಟವಿಲ್ಲ ಎಂದು ಹೇಳಿ ಇಲ್ಲಿಗೆ ಪಾದ ಹಾಕಿದ ಚಿತ್ರದುರ್ಗದ ಮುರುಘಾ ಶರಣರು ಮತ್ತು ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು, ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಭಯ ನಿವಾರಿಸುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದರೂ, ಜನ ಮಾತ್ರ ಇನ್ನೂ ಭಯದ ನೆರಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. <br /> <br /> ಒಂದರ ನಂತರ ಮತ್ತೊಂದು ಸಮಸ್ಯೆ ಎನ್ನುವಂತೆ ‘ಪರೇಶಾನ್’ ಆಗಿರುವ ಗ್ರಾಮಸ್ಥರು, ಬೀದಿಗಿಳಿದು ಹೋರಾಟ ಮಾಡುವ ಮುನ್ನ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸಲು ಮುಂದಾಗಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>