ಗೋಪಿ ಕಾಡಾನೆಗಳೊಂದಿಗೆ ಕಾದಾಟ ಆಡಿ ಅಪಾಯ ಉಂಟಾಗುವ ಸಾಧ್ಯತೆಯಿದ್ದು ಎಚ್ಚರಿಕೆ ವಹಿಸಲಾಗಿದೆ. ಕಾಡಾನೆಗಳಿಗೂ ಮದವೇರಿ ಪುಂಡಾಟದಲ್ಲಿ ತೊಡಗುವ ಸಾಧ್ಯತೆಯಿದ್ದು, ಅವುಗಳು ಶಿಬಿರದ ಆನೆಗಳತ್ತ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮದವೇರಿದ ಸಾಕಾನೆ ಹಾಗೂ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಸಿಬ್ಬಂದಿ, ಮಾವುತರು, ಕಾವಾಡಿಗರು ಹಗಲಿರುಳು ಶ್ರಮಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.