ಇಂದಿರಾ ನಗರದ ಎಚ್.ಎಸ್.ಗಣೇಶ್ ಅವರ ಮನೆಯು 2018ರ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಕುಸಿದಿತ್ತು. ಜೂನ್ 4ರಂದು ವಿತರಣೆ ಮಾಡಿದ್ದ ಮನೆಯಲ್ಲಿ ಗಣೇಶ್ ಅವರಿಗೂ ಮನೆ ನಿಗದಿಯಾಗಿತ್ತು. ಲೋಹಿತ್ಕುಮಾರ್, ನಾನೇ ಮನೆ ಕೊಡಿಸಿದ್ದೇನೆಂದು ಹೇಳಿ, ₹ 25 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮುಂಗಡವಾಗಿ ₹ 5 ಸಾವಿರ ಪಡೆದುಕೊಂಡಿದ್ದು, ಶುಕ್ರವಾರ ಉಳಿಕೆ ₹ 20 ಸಾವಿರ ಲಂಚವನ್ನು ಎಪಿಎಂಸಿ ಆವರಣದಲ್ಲಿ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.