ಈ ವೇಳೆ ಮಾತನಾಡಿದ ಪುಸ್ತಕದ ಲೇಖಕಿ ಅಮ್ಮಾಟಂಡ ವಿಂದ್ಯಾ ದೇವಯ್ಯ, ‘ಈ ಪುಸ್ತಕ ಬರೆಯಲು ಪತಿ ದೇವಯ್ಯ ಅವರ ಪ್ರೋತ್ಸಾಹ ಕಾರಣ. ನಾನು ನಿತ್ಯದ ಬದುಕಿನಲ್ಲಿ ನಡೆಯುವ ಸಂಗತಿಗಳನ್ನೇ ಇಟ್ಟುಕೊಂಡು ಪದ್ಯಗಳನ್ನು ರಚಿಸಿದ್ದೇನೆ. ಈ ಪದ್ಯಗಳನ್ನು ನೋಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಅನಂತಶಯನ ಅವರು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರನ್ನು ಸಂಪರ್ಕಿಸಿ ಪುಸ್ತಕ ಪ್ರಕಾಶನಕ್ಕೆ ಪ್ರಯತ್ನಿಸಿದರು. ಬೊಳ್ಳಜಿರ ಬಿ.ಅಯ್ಯಪ್ಪ ಅವರು ತಮ್ಮ ಸಂಘಟನೆಯ ಸಹಕಾರದಿಂದ ಈ ಪುಸ್ತಕವನ್ನು ಹೊರ ತಂದರು’ ಎಂದು ಅವರು ಕೃತಜ್ಞತೆ ಅರ್ಪಿಸಿದರು.