‘ಸಂಸ್ಥೆಯ ಸಿಬ್ಬಂದಿಗಳಾದ ದರ್ಶನ್, ಗೋವಿಂದ, ಶ್ರೀನಿವಾಸ, ಮುತ್ತಪ್ಪ ಅವರು ವ್ಯವಸ್ಥಾಪಕರ ನಿರ್ದೇಶನದಂತೆ ತೋಟಕ್ಕೆ ಹೋದ ಜಾನುವಾರುಗಳಿಗೆ ವಿಷವುಣಿಸಿ ಸಾಯಿಸಿದ್ದಾರೆ. ಜಾನುವಾರುಗಳನ್ನು ಕಳೆದುಕೊಂಡಿದ್ದರಿಂದ ತನಗೆ ನಷ್ಟವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿಕಿರಗಂದೂರು ಗ್ರಾಮದ ಕೃಷಿಕ ಎಸ್.ಸಿ.ಗಿರೀಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.