<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೋಮವಾರ ಸಂಭ್ರಮ ಮೇಳೈಸಿತ್ತು. ಬಣ್ಣ ಬಣ್ಣದ ಉಡುಗೆ ತೊಟ್ಟ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇಡೀ ದಿನ ಮಕ್ಕಳು ಒತ್ತಡ ರಹಿತವಾಗಿ ಶಾಲೆಯಲ್ಲಿ ಕಾಲ ಕಳೆದಿದ್ದು ವಿಶೇಷ ಎನಿಸಿತ್ತು.</p>.<p>ವೇದಿಕೆಯ ಮೇಲೆ ಮಕ್ಕಳು ಕುಳಿತರೆ ಗಣ್ಯರು ಪ್ರೇಕ್ಷಕರಾದ ಅಪರೂಪದ ಕ್ಷಣಗಳಿಗೆ ಇಲ್ಲಿನ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಸಾಕ್ಷಿಯಾಯಿತು. ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ ಮತ್ತು ಅತಿಥಿಗಳಾಗಿ ಮಕ್ಕಳೇ ಭಾಗವಹಿ ಸಿದ್ದು ಎಲ್ಲರ ಗಮನ ಸೆಳೆಯಿತು.</p>.<p>ನಗರಸಭೆಯ ಹಿಂದೂಸ್ತಾನಿ ಶಾಲೆ, ಜಿ.ಟಿ. ರಸ್ತೆಯ ಸರ್ಕಾರಿ ಶಾಲೆ ಹಾಗೂ ಎ.ವಿ. ಶಾಲೆಯ ಮಕ್ಕಳು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳೊಂದಿಗೆ ಸೇರಿ ಆಯೋಜಿಸಿದ್ದ ಈ ವಿನೂತನ ಕಾರ್ಯಕ್ರಮವನ್ನು ಎ.ವಿ.ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಉದ್ಘಾಟಿಸಿದರು. ಜಿ.ಟಿ.ರಸ್ತೆಯ ನಗರಸಭೆ ಶಾಲೆಯ ಅಫ್ರೋಜ್ ಮುಖ್ಯ ಅತಿಥಿಯಾಗಿದ್ದಳು. ಶಿಶು ಕಲ್ಯಾಣ ಸಂಸ್ಥೆಯ ಸಿಂಚನಾ ಅಧ್ಯಕ್ಷತೆ ವಹಿಸಿದ್ದಳು.</p>.<p>ಅಫ್ರೋಜ್ ಜವಾಹರಲಾಲ್ ನೆಹರೂ ಕುರಿತು ಮಾತನಾಡಿದರೆ, ಸಿಂಚನಾ ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದಳು. ಮಕ್ಕಳು ಸಮೂಹ ಗಾಯನ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. 70ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.</p>.<p>ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನವನ್ನೂ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಕಾರ್ಯಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಿರ್ದೇಶಕರಾದ ಶಶಿ ಮೊಣ್ಣಪ್ಪ, ಕವಿತಾ ಇದ್ದರು.</p>.<p>ನಗರದ ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲೂ ಛದ್ಮವೇಷ ಸ್ಪರ್ಧೆ, ಹೂ ಅಲಂಕಾರ ಸ್ಪರ್ಧೆ, ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.</p>.<p class="Briefhead">ಕುಣಿದ ಶಿಕ್ಷಕರು</p>.<p>ಸುಂಟಿಕೊಪ್ಪ: ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಿಕ್ಷಕರು ಕುಣಿದು ಕುಪ್ಪಳಿಸಿ ಸಂತೋಷಪಟ್ಟರು.</p>.<p>ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ನಂತರ ಮುಖ್ಯ ಶಿಕ್ಷಕ ಸೆಲ್ವರಾಜು, ಶಿಕ್ಷಕರು ನೃತ್ಯ ಮಾಡಿ ಮಕ್ಕಳನ್ನು ರಂಜಿಸಿದರು. ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.</p>.<p>ಸಂಸ್ಥೆಯ ಮುಖ್ಯಸ್ಥರಾದ ರೆ.ಫಾ.ಅರುಳ್ ಸೆಲ್ವಕುಮಾರ್ ಅವರು ಮಕ್ಕಳ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.<br />ದಿನದ ಅಂಗವಾಗಿ ಪುಟಾಣಿ ಮಕ್ಕಳು ಸೀರೆ, ಶರ್ಟ್, ಲುಂಗಿ ತೊಟ್ಟು ಸಂಭ್ರಮಿಸಿದರು.</p>.<p class="Briefhead">ಚೆಂಬು; ಬಾಲಮೇಳ</p>.<p>ಬಾಲ ವಿಕಾಸ ಸಮಿತಿ, ಆನೆಹಳ್ಳ ಅಂಗನವಾಡಿ ಕೇಂದ್ರವು ಚೆಂಬು<br />ಗ್ರಾಮ ಆನೆಹಳ್ಳದಲ್ಲಿ ಕ್ರೀಡೋತ್ಸವ ನಡೆಸಿತು.</p>.<p>ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೊಸೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗೀತಾ ಶಿವರಾಮ ಕಾಚೇಲು, ದಿನೇಶ್ ಎಸ್.ಎನ್ ಸಣ್ಣಮನೆ, ಕೆ.ಎಸ್.ಚಂದ್ರಶೇಖರ ಕಾಚೇಲು, ಕೆ.ಆರ್.ಸೋಮಣ್ಣ ಇದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ವನಿತಾ ವಿಜಯ ವಹಿಸಿದ್ದರು.</p>.<p>ಅಂಗನವಾಡಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ಜತೆಗೆ, ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಸ್ತೆ ಓಟ, ಹಗ್ಗಜಗ್ಗಾಟ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳೂ ನಡೆದವು.</p>.<p>ಸಮಾರೋಪ ಸಮಾರಂಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ 32 ವರ್ಷ ಸೇವೆ ಸಲ್ಲಿಸಿದ ಆನೆಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಸರೋಜಿನಿ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖ್ಯ ಅತಿಥಿಗಳಾಗಿ ಶಿಶು<br />ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೀಲಾ ಅಶೋಕ, ರೇಣುಕಾ ಜಯರಾಮ, ಶೇಷಪ್ಪ, ಮಕ್ಕಳ ದಿನಾಚರಣೆಯ ಗೌರವಾರ್ಥ ಪುಟಾಣಿ ನಿಧಿಶ್ರೀ ವೇದಿಕೆಯಲ್ಲಿದ್ದರು. ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ<br />ಅಶ್ವಿನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೋಮವಾರ ಸಂಭ್ರಮ ಮೇಳೈಸಿತ್ತು. ಬಣ್ಣ ಬಣ್ಣದ ಉಡುಗೆ ತೊಟ್ಟ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇಡೀ ದಿನ ಮಕ್ಕಳು ಒತ್ತಡ ರಹಿತವಾಗಿ ಶಾಲೆಯಲ್ಲಿ ಕಾಲ ಕಳೆದಿದ್ದು ವಿಶೇಷ ಎನಿಸಿತ್ತು.</p>.<p>ವೇದಿಕೆಯ ಮೇಲೆ ಮಕ್ಕಳು ಕುಳಿತರೆ ಗಣ್ಯರು ಪ್ರೇಕ್ಷಕರಾದ ಅಪರೂಪದ ಕ್ಷಣಗಳಿಗೆ ಇಲ್ಲಿನ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಸಾಕ್ಷಿಯಾಯಿತು. ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ ಮತ್ತು ಅತಿಥಿಗಳಾಗಿ ಮಕ್ಕಳೇ ಭಾಗವಹಿ ಸಿದ್ದು ಎಲ್ಲರ ಗಮನ ಸೆಳೆಯಿತು.</p>.<p>ನಗರಸಭೆಯ ಹಿಂದೂಸ್ತಾನಿ ಶಾಲೆ, ಜಿ.ಟಿ. ರಸ್ತೆಯ ಸರ್ಕಾರಿ ಶಾಲೆ ಹಾಗೂ ಎ.ವಿ. ಶಾಲೆಯ ಮಕ್ಕಳು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳೊಂದಿಗೆ ಸೇರಿ ಆಯೋಜಿಸಿದ್ದ ಈ ವಿನೂತನ ಕಾರ್ಯಕ್ರಮವನ್ನು ಎ.ವಿ.ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಉದ್ಘಾಟಿಸಿದರು. ಜಿ.ಟಿ.ರಸ್ತೆಯ ನಗರಸಭೆ ಶಾಲೆಯ ಅಫ್ರೋಜ್ ಮುಖ್ಯ ಅತಿಥಿಯಾಗಿದ್ದಳು. ಶಿಶು ಕಲ್ಯಾಣ ಸಂಸ್ಥೆಯ ಸಿಂಚನಾ ಅಧ್ಯಕ್ಷತೆ ವಹಿಸಿದ್ದಳು.</p>.<p>ಅಫ್ರೋಜ್ ಜವಾಹರಲಾಲ್ ನೆಹರೂ ಕುರಿತು ಮಾತನಾಡಿದರೆ, ಸಿಂಚನಾ ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದಳು. ಮಕ್ಕಳು ಸಮೂಹ ಗಾಯನ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. 70ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.</p>.<p>ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನವನ್ನೂ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಕಾರ್ಯಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಿರ್ದೇಶಕರಾದ ಶಶಿ ಮೊಣ್ಣಪ್ಪ, ಕವಿತಾ ಇದ್ದರು.</p>.<p>ನಗರದ ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲೂ ಛದ್ಮವೇಷ ಸ್ಪರ್ಧೆ, ಹೂ ಅಲಂಕಾರ ಸ್ಪರ್ಧೆ, ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.</p>.<p class="Briefhead">ಕುಣಿದ ಶಿಕ್ಷಕರು</p>.<p>ಸುಂಟಿಕೊಪ್ಪ: ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಿಕ್ಷಕರು ಕುಣಿದು ಕುಪ್ಪಳಿಸಿ ಸಂತೋಷಪಟ್ಟರು.</p>.<p>ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p>.<p>ನಂತರ ಮುಖ್ಯ ಶಿಕ್ಷಕ ಸೆಲ್ವರಾಜು, ಶಿಕ್ಷಕರು ನೃತ್ಯ ಮಾಡಿ ಮಕ್ಕಳನ್ನು ರಂಜಿಸಿದರು. ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.</p>.<p>ಸಂಸ್ಥೆಯ ಮುಖ್ಯಸ್ಥರಾದ ರೆ.ಫಾ.ಅರುಳ್ ಸೆಲ್ವಕುಮಾರ್ ಅವರು ಮಕ್ಕಳ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.<br />ದಿನದ ಅಂಗವಾಗಿ ಪುಟಾಣಿ ಮಕ್ಕಳು ಸೀರೆ, ಶರ್ಟ್, ಲುಂಗಿ ತೊಟ್ಟು ಸಂಭ್ರಮಿಸಿದರು.</p>.<p class="Briefhead">ಚೆಂಬು; ಬಾಲಮೇಳ</p>.<p>ಬಾಲ ವಿಕಾಸ ಸಮಿತಿ, ಆನೆಹಳ್ಳ ಅಂಗನವಾಡಿ ಕೇಂದ್ರವು ಚೆಂಬು<br />ಗ್ರಾಮ ಆನೆಹಳ್ಳದಲ್ಲಿ ಕ್ರೀಡೋತ್ಸವ ನಡೆಸಿತು.</p>.<p>ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೊಸೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗೀತಾ ಶಿವರಾಮ ಕಾಚೇಲು, ದಿನೇಶ್ ಎಸ್.ಎನ್ ಸಣ್ಣಮನೆ, ಕೆ.ಎಸ್.ಚಂದ್ರಶೇಖರ ಕಾಚೇಲು, ಕೆ.ಆರ್.ಸೋಮಣ್ಣ ಇದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ವನಿತಾ ವಿಜಯ ವಹಿಸಿದ್ದರು.</p>.<p>ಅಂಗನವಾಡಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ಜತೆಗೆ, ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಸ್ತೆ ಓಟ, ಹಗ್ಗಜಗ್ಗಾಟ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳೂ ನಡೆದವು.</p>.<p>ಸಮಾರೋಪ ಸಮಾರಂಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ 32 ವರ್ಷ ಸೇವೆ ಸಲ್ಲಿಸಿದ ಆನೆಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಸರೋಜಿನಿ ಅವರನ್ನು ಸನ್ಮಾನಿಸಲಾಯಿತು.</p>.<p>ಮುಖ್ಯ ಅತಿಥಿಗಳಾಗಿ ಶಿಶು<br />ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೀಲಾ ಅಶೋಕ, ರೇಣುಕಾ ಜಯರಾಮ, ಶೇಷಪ್ಪ, ಮಕ್ಕಳ ದಿನಾಚರಣೆಯ ಗೌರವಾರ್ಥ ಪುಟಾಣಿ ನಿಧಿಶ್ರೀ ವೇದಿಕೆಯಲ್ಲಿದ್ದರು. ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ<br />ಅಶ್ವಿನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>