ಹೊಳೆ ಬದಿಯ ಕೆಲವು ಕಾಫಿ ಬೆಳೆಗಾರರು ಪಲ್ಪ್ ಮಾಡಿದ ನೀರನ್ನು ನೇರವಾಗಿ ಹೊಳೆಗೆ ಬಿಡುತ್ತಿರುವುದರಿಂದ ನೀರು ಕಲುಷಿತಗೊಂಡು ಜಲಚರಗಳು ಸಾಯುತ್ತಿವೆ. ಹೊಳೆಯ ನೀರು ಐಗೂರು, ಯಡವಾರೆ, ಗರಗಂದೂರು, ಹಾರಂಗಿ, ಹೊರಹೊಳೆ, ಕಾಳಿದೇವನ ಹೊಸೂರು, ಹುದುಗೂರು ಮೂಲಕ ಹಾರಂಗಿ ಜಲಾಶಯ ಸೇರಿ ಕಾವೇರಿ ನದಿಯ ಒಡಲು ಸೇರುತ್ತಿದೆ.