ಭಾನುವಾರ ಕ್ರೈಸ್ತ ಬಾಂಧವರು ಚರ್ಚ್ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಅದರಂತೆ ನಗರದ ಸೇಂಟ್ ಮೈಕಲರ ದೇವಾಲಯ ಸೇರಿದಂತೆ ಜಿಲ್ಲೆಯ ದೇವಾಲಯಗಳಲ್ಲಿ ಎಂದಿನಂತೆ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಚರ್ಚ್ನಲ್ಲೂ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿಬಾರಿ ಬಲಿಪೂಜೆ ಸಂದರ್ಭ ಪ್ರಸಾದವನ್ನು ಬಾಯಿಗೆ ನೀಡಲಾಗುತ್ತಿತ್ತು. ಆದರೆ, ಕೊರೊನಾ ಭೀತಿಯಿಂದ ಕೈಯಲ್ಲಿ ನೀಡಲಾಯಿತು. ಅಲ್ಲದೆ, ದೇವಾಲಯ ಪ್ರವೇಶಿಸುವ ಮುನ್ನ ತೀರ್ಥವನ್ನು ಇಡಲಾಗುತ್ತಿತ್ತು. ಭಕ್ತರು ಅದನ್ನು ಹಣೆಗೆ ಹಚ್ಚಿ ದೇವಾಲಯ ಪ್ರವೇಶಿಸುತ್ತಿದ್ದರು. ಎಲ್ಲರೂ ತೀರ್ಥ ಪಡೆಯಲು ಒಂದೇ ಕಪ್ಗೆ ಕೈ ಹಾಕುತ್ತಿದ್ದರಿಂದ ಅದನ್ನು ನಿಷೇಧಿಸಲಾಗಿತ್ತು.